Asianet Suvarna News Asianet Suvarna News

ನ. 11ರಂದು ರಾಜ್ಯಕ್ಕೆ ನಮೋ ಆಗಮನ: ಒಕ್ಕಲಿಗರ ಮತ ಸೆಳೆಯಲು ಬಿಜೆಪಿ ಪ್ಲಾನ್

ರಾಜ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಅಧಿಕಾರದ ಗದ್ದುಗೆಗಾಗಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ .
 

ದಿನಾಂಕ ಘೋಷಣೆಗೂ ಮನ್ನವೇ ಮತ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದ್ದು, ಈ ಹಿನ್ನೆಲೆ ನವೆಂಬರ್ 11 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಮೋದಿ ಆಗಮಿಸಲಿದ್ದು, ಮೋದಿ ಆಗಮನ ಹಿನ್ನೆಲೆ ಬೃಹತ್ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದ್ದು,ಸಮಾವೇಶದ ಯಶಸ್ಸಿಗಾಗಿ ಬಿಜೆಪಿ ನಾಯಕರಿಂದ ತಯಾರಿ ನಡೆದಿದೆ.

ಬೆಳಗಾವಿ ಮೂರು ರಾಜ್ಯಗಳ ಕೇಂದ್ರ ಸ್ಥಾನ: ಗೋವಾ ಸಿಎಂ ಸಾವಂತ

Video Top Stories