Asianet Suvarna News Asianet Suvarna News

ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದ ತ್ರಿಮೂರ್ತಿಗಳು..ಏಕಕಾಲದಲ್ಲಿ ಮೋದಿ , ಅಮಿತ್‌ ಶಾ ,ನಡ್ಡಾ ಮತಶಿಕಾರಿ..!

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಎಲ್ಲಾಪಕ್ಷಗಳು ಬರದಿಂದ ಪ್ರಚಾರ ಮಾಡುತ್ತಿದೆ. ಮತದಾರರನ್ನು ಸೆಳೆಯಲು ನಾನಾ ತಂತ್ರವನ್ನು ಮಾಡುತ್ತಿದೆ.

ರಾಜ್ಯದಲ್ಲಿ ವಿಧಾನ ಸಭೆ ಚುನಾವಣ ಕಾವು ಜೋರಾಗಿದ್ದು, ಎಲ್ಲಾಪಕ್ಷಗಳು ಬರದಿಂದ ಪ್ರಚಾರ ಮಾಡುತ್ತಿದೆ. ಮತದಾರರನ್ನು ಸೆಳೆಯಲು ನಾನಾ ತಂತ್ರವನ್ನು ಮಾಡುತ್ತಿದೆ. ಮೂರು ಪಕ್ಷಗಳಿಂದ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಅದರಲ್ಲೂ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಈ ಕಾರಣಕ್ಕೆ ಖುದ್ದು ಪ್ರಧಾನಿ ಮೋದಿ , ಅಮಿತ್‌ ಶಾ,  ನಡ್ಡಾ ಕರ್ನಾಟಕದಲ್ಲಿ ಪ್ರಚಾರವನ್ನು ಮಾಡುತ್ತಿದ್ದಾರೆ. 
ಉತ್ತರದಲ್ಲಿ ಮೋದಿ ಮೇನಿಯಾವಾದರೆ ದಕ್ಷಿಣದಲ್ಲಿ ಬಿಜೆಪಿ ಚಾಣಕ್ಯ ದಂಡಯಾತ್ರೆ ಮಾಡುತ್ತಿದ್ದಾರೆ. ಇನ್ನು ಮಧ್ಯ ಕರ್ನಾಟಕದಲ್ಲಿ ನಡ್ಡಾ ಪ್ರಚಾರ ಮಾಡುತ್ತಿದ್ದು ಉತ್ತರದಿಂದ ದಕ್ಷಿಣದವರೆಗೆ ಮತಬೇಟೆಗಿಳಿದಿದ್ದಾರೆ  ತ್ರಿಮೂರ್ತಿಗಳು.