Asianet Suvarna News Asianet Suvarna News

'ಮೋದಿ ವಿಷ ಸರ್ಪ': ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಾಪ್‌ ಸಿಂಹ ಆಕ್ರೋಶ

ಮಲ್ಲಿಕಾರ್ಜುನ ಖರ್ಗೆಗೆ ಸಂಸದ ಪ್ರತಾಪ್‌ ಸಿಂಹ ತರಾಟೆ
ರಾಜ್ಯ-ದೇಶದ ರಾಜಕೀಯದಲ್ಲಿ ನೀವು ದೊಡ್ಡ ವ್ಯಕ್ತಿ
ನಿಮ್ಮ ಹಿನ್ನೆಲೆ, ಅನುಭವಕ್ಕೆ ಇದು ಶೋಭೆಯಲ್ಲ
ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ಆಕ್ರೋಶ

ಮೈಸೂರು: ಮೋದಿ ವಿಷ ಸರ್ಪ ಎಂಬ ಮಲ್ಲಿಕಾರ್ಜುನ ಹೇಳಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಖರ್ಗೆಯವರ ಈ ಹೇಳಿಕೆಗೆ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಚಾಳಿ ನಿಮಗೆ ಅಂಟೋದು ಬೇಡ, ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ. ನೀವು ಉನ್ನತ ಸ್ಥಾನದಲ್ಲಿ ಇದ್ದೀರಿ, ಅದಕ್ಕೆ ತಕ್ಕಂತೆ ಮಾತನಾಡಿ. ನಿಮ್ಮ ಅನುಭವ, ಹಿನ್ನೆಲೆಗೆ ಇದು ಶೋಭೆ ತರುವುದಿಲ್ಲ ಎಂದು ಪ್ರತಾಪ್‌ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಈಡೀ ಕರ್ನಾಟಕ ನಾಚಿಕೆ ಪಡುವಂತ ಹೇಳಿಕೆ ಕೊಡಬೇಡಿ. ಅಲ್ಲದೇ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಾರ್ಯಕ್ರಮಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಇಂತಹ ಕೆಲಸ ಮತ್ತು ಈ ರೀತಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದು ಪ್ರತಾಪ್‌ ಸಿಂಹ ಕಿಡಿಕಾರಿದರು. 

ಇದನ್ನೂ ವೀಕ್ಷಿಸಿ: 'ಮೋದಿ ವಿಷದ ಹಾವು ಇದ್ದಂತೆ' : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿದ ಸಿ.ಸಿ. ಪಾಟೀಲ್‌