Asianet Suvarna News Asianet Suvarna News

ಜೆಡಿಎಸ್‌ ಮುಗಿಸಬೇಕು ಎಂಬುದೇ ಕಾಂಗ್ರೆಸ್‌ ಲೀಡರ್‌ಗಳ ಅಜೆಂಡಾ: ಎಚ್‌ಡಿಕೆ ಗರಂ

ಆರ್‌ಆರ್‌ ನಗರ ಚುನಾವಣಾ ಅಖಾಡದಲ್ಲಿ ಕುಮಾರಣ್ಣ- ಡಿಕೆಶಿ ವಾಕ್ಸಮರ ಜೋರಾಗಿದೆ. ದಿನನಿತ್ಯ ಮಾತಿನ ಚಕಮಕಿ ನಡೆಯುತ್ತಿದೆ. ಕುಮಾರಣ್ಣ ಡಿಕೆಶಿ ಮೇಲೆ ಗರಂ ಆಗಿದ್ದಾರೆ. 

ಬೆಂಗಳೂರು (ಅ. 20): ಆರ್‌ಆರ್‌ ನಗರ ಚುನಾವಣಾ ಅಖಾಡದಲ್ಲಿ ಕುಮಾರಣ್ಣ- ಡಿಕೆಶಿ ವಾಕ್ಸಮರ ಜೋರಾಗಿದೆ. ದಿನನಿತ್ಯ ಮಾತಿನ ಚಕಮಕಿ ನಡೆಯುತ್ತಿದೆ. ಕುಮಾರಣ್ಣ ಡಿಕೆಶಿ ಮೇಲೆ ಗರಂ ಆಗಿದ್ದಾರೆ. ಜೆಡಿಎಸ್‌ ಮುಗಿಸಬೇಕು ಎಂಬುದೇ ಕಾಂಗ್ರೆಸ್‌ ಲೀಡರ್‌ಗಳ ಅಜೆಂಡಾ ಆಗಿದೆ. ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ. ಬಿಜೆಪಿಗಿಂತ ಜೆಡಿಎಸ್‌ ಮೇಲೆಯೇ ಅವರಿಗೆ ಹೆಚ್ಚು ಆಕ್ರೋಶವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

'ಬೆಂಕಿಯಲ್ಲಿ ಅರಳಿದ ಕುಸುಮಾ'; RR ನಗರದಲ್ಲಿ ಎಮೋಶನಲ್ ಕಾರ್ಡ್ ಬಳಸುತ್ತಿದೆ ಕಾಂಗ್ರೆಸ್

ಕೆಪಿಸಿಸಿ ಅಧ್ಯಕ್ಷರಾದ ಮಾತ್ರಕ್ಕೆ ಇಡೀ ಸಮುದಾಯಕ್ಕೆ ಮುಖಂಡರಾಗುವುದಿಲ್ಲ. ಅವರೇನು ಕಿಂದರಿ ಜೋಗಿಯೇ? ಇಡೀ ಒಕ್ಕಲಿಗ ಸಮುದಾಯ ಅವರ ಹಿಂದೆ ಹೋಗಲು? ಎಂದು ಲೇವಡಿಯನ್ನೂ ಮಾಡಿದ್ದಾರೆ. 
 

Video Top Stories