Asianet Suvarna News Asianet Suvarna News

News Hour ಸದ್ಯಕ್ಕೆ ಸಂಪುಟ ಸರ್ಜರಿ ಆಗೋದು ಅನುಮಾನ!

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಸಂಪುಟ ಸರ್ಜರಿ
ರಾಜ್ಯದಲ್ಲಿ ಸದ್ಯಕ್ಕೆ ಸಂಪುಟದಲ್ಲಿ ಬದಲಾವಣೆ ಆಗುವುದು ಅನುಮಾನ
ಸಂಪುಟ ಸೇರಲು ಆಕಾಂಕ್ಷಿಗಳ ದಂಡು

ಬೆಂಗಳೂರು (ಫೆ. 3): ರಾಜ್ಯದಲ್ಲಿ ಸಚಿವ ಸಂಪುಟ ( Cabinet Reshuffle) ಸರ್ಜರಿ ಬಗ್ಗೆ ಮಾತುಕತೆಗಳು ಜೋರಾಗಿದ್ದ ನಡುವೆಯೇ ಕೇಂದ್ರದಿಂದ ಸಣ್ಣ ಸೂಚನೆ ದೊರೆತಿದ್ದು, ಸದ್ಯಕ್ಕೆ ಸಂಪುಟದಲ್ಲಿ ಸರ್ಜರಿ ಆಗುವುದು ಅನುಮಾನ ಎನ್ನಲಾಗಿದೆ. ರಾಷ್ಟ್ರೀಯ ಬಿಜೆಪಿ (National BJP) ಪ್ರಸ್ತುತ ಪಂಚ ರಾಜ್ಯ ಚುನಾವಣೆಯ (Five State Election) ಮೇಲೆ ಹೆಚ್ಚಿನ ಗಮನ ನೀಡಿದ್ದು, ಅದರ ಫಲಿತಾಂಶ ಹೊರಬಿದ್ದ ಬಳಿಕವೇ ಕರ್ನಾಟಕದ ಸಂಪುಟದ ಅಹವಾಲನ್ನು ಕೇಳಲಿದೆ ಎಂದು ವರದಿಯಾಗಿದೆ.

News Hour : ಸಚಿವ ಸಂಪುಟಕ್ಕೆ ಹೊಸ ಮುಖಗಳು,  ಬೊಮ್ಮಾಯಿಗೆ ಪರೀಕ್ಷೆ!
ಇದರ ನಡುವೆ ಸಂಪುಟ ಸೇರಲು ಸಚಿವಾಕಾಂಕ್ಷಿಗಳ ದಂಡು ಗೋಚರವಾಗಿದೆ. ಸಂಪುಟಕ್ಕೆ ಸೇರ್ಪಡೆಗೊಳ್ಳಲು13 ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಬಾರಿ ಸಂಪುಟ ವಿಸ್ತರಣೆ ಆಗಲಿದೆಯೇ ಅಥವಾ ಪುನರ್ ರಚನೆ ಆಗಲಿದೆಯೇ ಎನ್ನುವ ಕುತೂಹಲ ಇನ್ನೂ ಉಳಿದುಕೊಂಡಿದೆ. ಹಳಬರನ್ನು ಕೈಬಿಟ್ಟು ಹೊಸಬರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಗಳು ಕೇಳಿಬಂದಿದೆ. ವಯಸ್ಸಾದ, ಕೆಲಸ ಮಾಡದ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಬೇಕು ಎನ್ನುವ ಮಾತುಗಳು ಕೇಳಿಬಂದಿವೆ.

Video Top Stories