ನನ್ನಿಂದ ಆಗುವ ಕೆಲಸವನ್ನು ಮಾಡುತ್ತೇನೆ, ನಿಂಗವ್ವ ನನ್ನ ಭೇಟಿಯಾಗು ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬಸ್‌ ಹತ್ತುವಾಗ ಧಾರವಾಡದಲ್ಲಿ ಅಜ್ಜಿಯೊಬ್ಬರು ಬಸ್‌ಗೆ ಶಿರಬಾಗಿ ನಮಸ್ಕರಿಸಿದ್ದಾರೆ. ಅಜ್ಜಿ ನಿಂಗವ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಜೊತೆ ಮಾತನಾಡಿದ್ರು. 

Share this Video
  • FB
  • Linkdin
  • Whatsapp

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಬಸ್‌ ಹತ್ತುವಾಗ ಧಾರವಾಡದಲ್ಲಿ ಅಜ್ಜಿಯೊಬ್ಬರು ಬಸ್‌ಗೆ ಶಿರಬಾಗಿ ನಮಸ್ಕರಿಸಿದ್ದಾರೆ. ಈ ಫೋಟೋವನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ. ಇದೀಗ ಅಜ್ಜಿ ನಿಂಗವ್ವ ಜೊತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಮಹಿಳೆಯರು ಸುಗಮ ಜೀವನ ನಡೆಸಲು ಇದರಿಂದ ಸಹಾಯವಾಗುತ್ತದೆ. ಮಹಿಳೆಯರು ಮನೆಯವರ ಹತ್ತಿರ ಕೈಚಾಚುವ ಅಗತ್ಯವಿಲ್ಲ. ನಾವು ಇನ್ನೂ ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತೇವೆ. ನಮ್ಮ ಊರಿನಲ್ಲಿ ಮಳೆ ಇಲ್ಲ. ಸ್ವಲ್ಪ ಸಹಾಯ ಮಾಡಿ ಎಂದ ನಿಂಗವ್ವ ಅವರಿಗೆ ಸಹಾಯ ಮಾಡುವ ಭರವಸೆಯನ್ನು ಸಚಿವರು ನೀಡಿದರು. ಈ ಫೋಟೋ ಒಂದು ಧನ್ಯತಾ ಭಾವನೆಯನ್ನು ಸೂಚಿಸುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ಇನ್ನೂ 10 ವರ್ಷ ಆಡಳಿತ ನಡೆಸಲಿ: ಸಿಎಂಗೆ ಹಾರೈಸಿದ ಅಜ್ಜಿ ನಿಂಗವ್ವ

Related Video