ಹಾಸನ ಕ್ಷೇತ್ರದ ಮುಖಂಡರ ಸಭೆ ಕರೆದ ಹೆಚ್‌ಡಿಕೆ: ಟಿಕೆಟ್‌ ಗೊಂದಲಕ್ಕೆ ಭಾನುವಾರ ತೆರೆ?

ಹಾಸನ ಜೆಡಿಎಸ್ ಟಿಕೆಟ್‌ ಗೊಂದಲಕ್ಕೆ ಭಾನುವಾರ  ಹೆಚ್‌.ಡಿ ಕುಮಾರಸ್ವಾಮಿ ತೆರೆ ಎಳೆಯಲಿದ್ದು, ಭಾರೀ ಕುತೂಹಲ ಮೂಡಿಸಿದೆ.
 

Share this Video
  • FB
  • Linkdin
  • Whatsapp

ಹಾಸನ ಜೆಡಿಎಸ್ ಟಿಕೆಟ್‌ ಗೊಂದಲಕ್ಕೆ ಹೆಚ್‌ಡಿಕೆ ತೆರೆ ಎಳೆಯಲಿದ್ದು, ಭಾನುವಾರ ಬೆಂಗಳೂರಿನಲ್ಲಿ ಹಾಸನ ಮುಖಂಡರ ಸಭೆ ನಡೆಸಲಿದ್ದಾರೆ. ಹಾಸನ ಕ್ಷೇತ್ರದ ಮುಖಂಡರ ಸಭೆಯನ್ನು ಕರೆಯಲಾಗಿದ್ದು, ಹಾಸನ ಕ್ಷೇತ್ರದ ಟಿಕೆಟ್‌ ಹಂಚಿಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಜಿಪಂ ಮಾಜಿ ಸದಸ್ಯರು, ತಾಪಂ ಮಾಜಿ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕಚೇರಿಯಿಂದಲೇ ಬುಲಾವ್‌ ಬಂದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರ ಜೊತೆ ಹೆಚ್‌ಡಿಕೆ ಸಭೆ ನಡೆಸಲಿದ್ದು, ಸುಮಾರು 300 ಜನ ಪ್ರಮುಖರ ಸಭೆ ಕರೆಯಲಾಗಿದೆ. ಚಿಕ್ಕಮಗಳೂರು ಪಂಚರತ್ನ ಯಾತ್ರೆ ಬಳಿಕ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಹಾಸನ ಅಭ್ಯರ್ಥಿ ಯಾರಾದರೆ ಗೆಲುವು ಸುಲಭ ಎಂಬ ಬಗ್ಗೆ ಚರ್ಚೆ ಮಾಡಲಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ಎಸ್.ವೈ ಭಾಷಣ ನನಗೆ ಸ್ಫೂರ್ತಿ: ನರೇಂದ್ರ ಮೋದಿ ಮೆಚ್ಚುಗೆ

Related Video