Asianet Suvarna News Asianet Suvarna News

ಗೌಪ್ಯ ಪತ್ರದ ಬಗ್ಗೆ ಅಚ್ಚರಿ ಹೇಳಿಕೆ: ಟಿಕೆಟ್‌ ಹಂಚಿಕೆಯಲ್ಲಿ ಸಿದ್ದರಾಮಯ್ಯರನ್ನ ಹೊರಗಿಡ್ತಾರಾ ಡಿಕೆಶಿ?

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಫೈಟ್ ಶುರುವಾದಂತಿದೆ. ಇನ್ನು ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಮಾತುಗಳನ್ನಾಡಿದ್ದಾರೆ.

ಬೆಂಗಳೂರು, (ಸೆಪ್ಟೆಂಬರ್. 16): ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಫೈಟ್ ಶುರುವಾದಂತಿದೆ. ಇನ್ನು ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಡಕ್ ಮಾತುಗಳನ್ನಾಡಿದ್ದಾರೆ.

ಇಡಿ ಸಮನ್ಸ್‌ಗೆ ಬಿಜೆಪಿ ವಿರುದ್ಧ ಕಿಡಿ, ಸಿದ್ದು ಮತ್ತು ಟೀಂಗೆ ಡಿಕೆಶಿ ಟಕ್ಕರ್ !

ಪಕ್ಷಕ್ಕಾಗಿ  ಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಲ್ಲದೇ ಅಭ್ಯರ್ಥಿ ಬಗ್ಗೆ ಒಂದು ಗೌಪ್ಯ ಪತ್ರ ಪಡೆಯುತ್ತೇನೆ. ಆ ಪತ್ರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ನನ್ನ(ಡಿಕೆಶಿ) ಬಳಿ ಮಾತ್ರ ಇರುತ್ತೆ. ಸಿಎಲ್‌ಪಿ ನಾಯಕರಿಗೆ ಆ ಪತ್ರ ತೋರಿಸುವುದಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಮೂಲಕ  ಪರೋಕ್ಷವಾಗಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊರಗಿಡುವ ಮಾತುನ್ನಾಡಿದ್ದಾರೆ.

Video Top Stories