
NewsHour ರಾಜ್ಯಸಭಾ ಚುನಾವಣೆಗಾಗಿ ಹಳೇಯದು ಮರೆಯೋಣ ಎಂದರು, ಮರೆತಿಲ್ಲ ಯಾರೊಬ್ಬರು!
- ನಾಲ್ಕನೇ ಸ್ಥಾನಕ್ಕೆ ಪೈಪೋಟಿ, ಯಾರಿಗೆ ಲಾಭ, ಯಾರಿಗೆ ನಷ್ಟ?
- ಡಿಕೆಶಿ ಹಾಗೂ ಹೆಚ್ಡಿಕೆ ನಡುವೆ ಫೋನ್ ಮಾತುಕತೆ!
- ದೇವೇಗೌಡರ ಕುಟುಂಬಕ್ಕೆ ಕೋಟಿ ಕೋಟಿ ಸಾಲ ನೀಡಿರುವ ಕುಪೇಂದ್ರ ರೆಡ್ಡಿ
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಕೋಮುವಾದಿ ಪಕ್ಷವನ್ನು ದೂರವಿಡಲು, ನಾವು ಹಳೇಯದು ಮರೆಯೋಣ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದಾರೆ. ಆದರೆ ಎರಡೂ ಪಕ್ಷ ಹಳೇ ವಿಚಾರ ಮತ್ತೆ ಮತ್ತೆ ಕೆದಕಿ ಸಾವಲಿಗೆ ಸವಾಲು ಹಾಕಿದೆ. ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ. ಆದರೆ ಬೆಟ್ಟದಷ್ಟು ಕುತೂಹಲ ಹಾಗೇ ಉಳಿದಿಕೊಂಡಿದೆ. ಕಾಂಗ್ರೆಸ್ ಜೆಡಿಎಸ್ ಪ್ರತಿಷ್ಠೆಯ ಕಣದಿಂದ ಬಿಜೆಪಿ ಹಾದಿ ಸುಲಭವಾಗಲಿದೆ ಎನ್ನುತ್ತಿದೆ ಲೆಕ್ಕಾಚಾರ.