Asianet Suvarna News Asianet Suvarna News

ಎತ್ತಿನಗಾಡಿ, ಸೈಕಲ್, ಟಾಂಗಾ.. ಸಿದ್ದು-ಡಿಕೆ ಭಾಯಿ ಭಾಯಿ..! ಏನೀ ಒಗ್ಗಟ್ಟಿನ ಮಂತ್ರ.?

ಸಿಎಂ ರೇಸ್‌ನಲ್ಲಿ ಕಿತ್ತಾಡಿಕೊಂಡಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈಗ ಭಾಯಿ ಭಾಯಿ ಅಂತಾಗಿದ್ದಾರೆ. ನಾನಾ-ನೀನಾ ಎಂದು ಗುದ್ದಾಡುತ್ತಿದ್ದವರು ಒಂದೇ ಸಲ ಒಗ್ಗಟ್ಟು ಪ್ರದರ್ಶಿಸುತ್ತಿರುವ ಅಚ್ಚರಿ ಮೂಡಿಸಿದೆ. 

ಬೆಂಗಳೂರು (ಸೆ. 25): ಸಿಎಂ ರೇಸ್‌ನಲ್ಲಿ ಕಿತ್ತಾಡಿಕೊಂಡಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈಗ ಭಾಯಿ ಭಾಯಿ ಅಂತಾಗಿದ್ದಾರೆ.

ರಾಜ್ಯ ವಿಧಾನಸಭೆ ಕೊನೆ ದಿನದ ಕಲಾಪದಲ್ಲಿ ನಾಗ್ಪುರ VS ಇಟಲಿ ಫೈಟ್

ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಇಬ್ಬರೂ ಒಟ್ಟಾಗಿ ಎತ್ತಿನಗಾಡಿ, ಸೈಕಲ್ ಹಾಗೂ ಟಾಂಗಾ ಸವಾರಿ ಮಾಡಿಕೊಂಡು ಸದನಕ್ಕೆ ಬಂದು ಗಮನ ಸೆಳೆದಿದ್ದಾರೆ.  ನಾನಾ-ನೀನಾ ಎಂದು ಗುದ್ದಾಡುತ್ತಿದ್ದವರು ಒಂದೇ ಸಲ ಒಗ್ಗಟ್ಟು ಪ್ರದರ್ಶಿಸುತ್ತಿರುವ ಅಚ್ಚರಿ ಮೂಡಿಸಿದೆ. ಏನೀ ಒಗ್ಗಟ್ಟಿನ ಮಂತ್ರ.? ಇಬ್ಬರ ನಡುವಿನ ಅಸಮಾಧಾನ ಮುಗಿಯಿತಾ.? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!