Asianet Suvarna News Asianet Suvarna News

ಬೊಮ್ಮಾಯಿ ಸರ್ಕಾರದ ಮೀಸಲಾತಿ ಮಾಸ್ಟರ್ ಸ್ಟ್ರೋಕ್.. ಪತರಗುಟ್ಟಿತಾ ಹಸ್ತ ಪಡೆ ?

ಎಲೆಕ್ಷನ್ ಹೊತ್ತಲ್ಲಿ ಪ್ರಯೋಗಿಸಿರುವ ಮೀಸಲಾತಿ ಅಸ್ತ್ರ ಯಾರಿಗೆ ಲಾಭ ತರಲಿದೆ..? ಯಾರಿಗೆ ಹೇಗೆ ನಷ್ಟವಾಗಲಿದೆ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ 

ಬಸವರಾಜ ಬೊಮ್ಮಾಯಿ ಸರ್ಕಾರದ ಮೀಸಲಾತಿ ಎನ್ನುವ  ಮಾಸ್ಟರ್ ಸ್ಟ್ರೋಕ್ ಗೆ ಹಸ್ತ ಪಡೆ ಪತರಗುಟ್ಟಿದ್ಯಾ ಎನ್ನುವ ಅನುಮಾನ ಹಲವರನ್ನು ಕಾಡುತ್ತಿದೆ. ಇನ್ನು .2ಬಿಯಲ್ಲಿದ್ದ ಮುಸ್ಲಿಮರ ಮೀಸಲಾತಿ ತೆಗೆದು,  ಒಕ್ಕಲಿಗರಿಗೆ ಹಾಗೂ ಲಿಂಗಾಯತರಿಗೆ ಅದನ್ನ ಹಂಚಿಕೆ ಮಾಡಿದೆ ರಾಜ್ಯ ಸಚಿವ ಸಂಪುಟ. 2 ಬಿ ಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲಾಗಿದ್ದು,  2 ಬಿಯಲ್ಲಿದ್ದ ಮುಸ್ಲಿಮರನ್ನು ಆರ್ಥಿಕ ಹಿಂದುಳಿದ ವರ್ಗಗಳ ಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಸರ್ಕಾರದ ಈ ನಡೆಗೆ ಮುಸ್ಲಿಮರಿಮದ ವಿರೋಧ ವ್ಯಕ್ತವಾಗಿದೆ. ಸಂವಿಧಾನ ವಿರೋಧಿ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕರ್ನಾಟಕದ ನಾನಾ ಮುಸ್ಲಿಂ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಅದೆಲ್ಲಕ್ಕಿಂತಾ ಮುಖ್ಯವಾಗಿ, ಎಲೆಕ್ಷನ್ ಹೊತ್ತಲ್ಲೇ ಪ್ರಯೋಗಿಸಿರೋ ಈ ಮೀಸಲಾತಿ ಅಸ್ತ್ರ ಯಾರಿಗೆ ಲಾಭ ತರಲಿದೆ..? ಯಾರಿಗೆ ಹೇಗೆ ನಷ್ಟವಾಗಲಿದೆ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ .

Video Top Stories