ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ನೆಹರೂ ಔಟ್‌, ಸರ್ಕಾರದ ವಿರುದ್ಧ ಸಿದ್ಧು ಕೆಂಡಾಮಂಡಲ!

ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭಾನುವಾರ ಮಾಧ್ಯಮ ಜಾಹೀರಾತು ನೀಡಿದೆ. ಸ್ವಾತಂತ್ರ್ಯ ಹೋರಾಟಗಾರರ ಈ ಜಾಹೀರಾತಿನಲ್ಲಿ ಜವಹರಲಾಲ್‌ ನೆಹರೂ ಅವರ ಚಿತ್ರವನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ವಿಚಾರವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.14): ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ನೀಡಿದ ಮಾಧ್ಯಮ ಜಾಹೀರಾತಿನಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಫೋಟೋವನ್ನು ರಾಜ್ಯ ಸರ್ಕಾರ ಬಿಟ್ಟಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. 

ಅಧಿಕಾರ ಉಳಿಸಿಕೊಳ್ಳಲು ಈ ಪರಿ ಗುಲಾಮಗಿರಿ ಅಗತ್ಯವಿರಲಿಲ್ಲ. ನೆಹರು ಹೆಸರು ಕೈಬಿಡುವಷ್ಟು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು. ಹೊರಾಟದಲ್ಲಿ ಭಾಗಿಯಾಗಿ ನೆಹರು 9 ವರ್ಷ ಜೈಲಿನಲ್ಲಿದ್ದರು. ಸಾವರ್ಕರ್‌ ಅವರಂತೆ ಜೈಲಿನಿಂದ ಬಿಡುಗಡೆಯಾಗಲು ಬ್ರಿಟಿಷರ ಕಾಲನ್ನು ಇವರು ಹಿಡಿದಿರಲಿಲ್ಲ. ನೆಹರೂ ಅವರಿಗೆ ಮಾಡಿರುವ ಅಪಮಾನವನ್ನು ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Modi vs Nehru ನೆಹರೂ ಎಲ್ಲಿ? ಮೋದಿ ಎಲ್ಲಿ? ಆಕಾಶ ಭೂಮಿಯಷ್ಟು ಅಂತರ ಎಂದ ಸಿದ್ದರಾಮಯ್ಯ

ಟ್ವೀಟ್‌ ಮೂಲಕ ಸಿದ್ಧರಾಮಯ್ಯ ಕಿಡಿಕಾರಿದ್ದು, ಇದು ನೆಹರೂ ಅವರಿಗೆ ಮಾಡಿರುವ ನೇರ ಅವಮಾನ ಎಂದಿದ್ದಾರೆ. ಬೊಮ್ಮಾಯಿಯಂಥ ಮುಖ್ಯಮಂತ್ರಿಯಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಈಗ ಬೊಮ್ಮಾಯಿ ಇತಿಹಾಸವನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್‌ ಕಿಡಿಕಾರಿದ್ದಾರೆ.

Related Video