Asianet Suvarna News Asianet Suvarna News

ಜೋಶಿ ಜಾತಿಯ ಬಗ್ಗೆ ಹೆಚ್‌ಡಿಕೆಗೆ ಮಾಹಿತಿ ಕೊರತೆಯಿದೆ: ಸಿ.ಟಿ ರವಿ ವಾಗ್ದಾಳಿ

ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಯಲ್ಲಿ ಬ್ರಾಹ್ಮಣ ಸಿಎಂ ಮಾಡಲು ಆರ್ ಎಸ್ಎಸ್ ನಿರ್ಧರಿಸಿದೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಕೇಸರಿ ಪಡೆ ಕಿಡಿ ಕಾರಿದೆ.
 

ಬಿಜೆಪಿ ಗೆದ್ದರೆ ಬ್ರಾಹ್ಮಣ ಸಿಎಂ ಹಾಗೂ 8 ಮಂದಿ ಡಿಸಿಎಂ ಎಂದು ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದು, ಕೇಸರಿ ಪಡೆ ಸಿಡಿದೆದ್ದಿದೆ‌. ಪ್ರಲ್ಹಾದ್‌ ಜೋಶಿಯನ್ನು ಸಿಎಂ ಮಾಡಲು RSS ನಿರ್ಧರಿಸಿದೆ, ಜೋಶಿ ಮರಾಠ ಬ್ರಾಹ್ಮಣ ಸಮುದಾಯದವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಕುರಿತು ಸಿ‌ಟಿ ರವಿ ವಾಗ್ದಾಳಿ ನಡೆಸಿದ್ದು, ಜೋಶಿ ಅವರ ಜಾತಿಯ ಬಗ್ಗೆ ಹೆಚ್‌ಡಿಕೆಗೆ ಮಾಹಿತಿ ಕೊರತೆಯಿದೆ. ಪ್ರಲ್ಹಾದ್ ಜೋಶಿಯವರ 4-5 ತಲೆಮಾರು ಕರ್ನಾಟಕದಲ್ಲಿದೆ. ಯೋಗ್ಯತೆ ಇರುವುದಕ್ಕೆ ಜೋಶಿ ಹೆಸರು ಸಿಎಂ ಆಕಾಂಕ್ಷಿ ಪಟ್ಟಿಯಲ್ಲಿದೆ. ಕುಮಾರಸ್ವಾಮಿ ಮಾತಿನ ಮೂಲಕ ಬ್ರಾಹ್ಮಣ ದ್ವೇಷ ತೋರಿಸುತ್ತಿದ್ದಾರೆ‌. ಅವರು ನಮ್ಮ ಸಂಸದೀಯ ಮಂಡಳಿ ಸದಸ್ಯರಲ್ಲ ಎಂದು ಕಿಡಿ ಕಾರಿದರು.

Video Top Stories