
ಇಸ್ರೋದಲ್ಲಿ ಜಾತಿ ಹುಡುಕಿದ ಕಾಂಗ್ರೆಸ್, ಬಿಕೆ ಹರಿಪ್ರಸಾದ್ ಕೀಳು ರಾಜಕೀಯಕ್ಕೆ ಆಕ್ರೋಶ!
ಚಂದ್ರಯಾನ ಯಶಸ್ಸಿನಲ್ಲೂ ಜಾತಿ ಹುಡುಕಿದ ಕಾಂಗ್ರೆಸ್, ಕಾವೇರಿ ಹೋರಾಟಕ್ಕೆ ಧುಮುಕಿದ ಜೆಡಿಎಸ್, 40 ವರ್ಷದಲ್ಲಿ ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು? ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಇಸ್ರೋದ ಚಂದ್ರಯಾನ 3 ಯಶಸ್ವಿಯಾಗಿದೆ. ಈಗಾಗಲೇ ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಹಲವು ಮಹತ್ವದ ಮಾಹಿತಿಯನ್ನು ಬಹಿರಂಗೊಳಿಸಿದೆ. ಈ ಯಶಸ್ಸಿನ ಬೆನಲ್ಲೇ ಸೂರ್ಯನ ಅಧ್ಯಯನಕ್ಕಾಗಿ ಅದಿತ್ಯ ಎಲ್ 1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರ ನಡುವೆ ಕಾಂಗ್ರೆಸ್ ಕೀಳು ರಾಜಕೀಯ ಪ್ರದರ್ಶಿಸಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ. ಇಸ್ರೋದಲ್ಲಿನ ವಿಜ್ಞಾನಿಗಳ ಜಾತಿ ಹುಡುಕಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಚಂದ್ರಯಾನ ಯಶಸ್ಸಿನ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್, ಇಸ್ರೋದ ವಿಜ್ಞಾನಿಗಳ ಜಾತಿ ಹುಡುಕಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ