Asianet Suvarna News Asianet Suvarna News

ಕೋಲಾರದಲ್ಲಿ ಸಿದ್ದರಾಮಯ್ಯ ಸೋಲಿಗೆ ಚಕ್ರವ್ಯೂಹ: ಟಗರು ಬೇಟೆಗೆ ಖೆಡ್ಡಾ ರೆಡಿ

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಲೆಕ್ಕಾಚಾರದಲ್ಲಿದ್ದು, ಆದರೆ ಅವರನ್ನು ಸೋಲಿಸಲು ಈಗಾಗಲೇ ರಣತಂತ್ರ ರೂಪಿಸಲಾಗುತ್ತಿದೆ.
 

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ರೆಡಿಯಾಗಿದ್ದ ಸಿದ್ದರಾಮಯ್ಯಗೆ, ಕೋಲಾರ ಖೆಡ್ಡಾ ಭಯ ಕಾಡ್ತಾ ಇದೆ. ಸಿದ್ದು ಸೋಲಿಗೆ ಕೋಲಾರದಲ್ಲಿ ತೆರೆಯ ಹಿಂದೆ  ರೋಚಕ ಖೆಡ್ಡಾ ಸಿದ್ಧವಾಗುತ್ತಿದೆ. ವರ್ತೂರು ಪ್ರಕಾಶ್, ಕೆ.ಎಚ್ ಮುನಿಯಪ್ಪ, ಜೆಡಿಎಸ್ ಹಾಗೂ ಬಿಜೆಪಿಯಿಂದ ಸಿದ್ದರಾಮಯ್ಯರನ್ನು ಮಣಿಸಲು ಪ್ಲಾನ್ ನಡೆದಿದೆ. ಗೆಲುವು-ಸೋಲು ಜನರ ಕೈಯಲ್ಲಿ ಇದೆ. ಆದ್ರೆ ಸೋಲು ಗೆಲುವಿನ ಮಧ್ಯೆ ತಂತ್ರ-ರಣತಂತ್ರ-ಕುತಂತ್ರಗಳನ್ನು ಹೆಣೆಯೋದು ರಾಜಕಾರಣಿಗಳೇ ಅಲ್ವಾ. ಹಾಗಾದ್ರೆ ಕೋಲಾರದಲ್ಲಿ ಸ್ಪರ್ಧಿಸಿದ್ರೆ ಸಿದ್ದರಾಮಯ್ಯ ಖೆಡ್ಡಾಗೆ ಬೀಳೋದು ಗ್ಯಾರಂಟಿನಾ ಕಾದು ನೋಡಬೇಕಿದೆ.

Threat Letter to Rahul Gandhi: ಬಾಂಬ್‌ ಸ್ಪೋಟಿಸಿ ಹತ್ಯೆ, ರಾಹುಲ್‌ ಗಾಂಧಿಗೆ ಬೆದರಿಕೆ ಪತ್ರ!

Video Top Stories