News Hour: ಸಮಾವೇಶ ಸಭೆ ನೆಪ.. ಮನವೊಲಿಕೆ ಜಪ!

ಕೆಪಿಸಿಸಿ ಪವರ್​ ಫೈಟ್​ ಬೆಳಗಾವಿಗೆ ಶಿಫ್ಟ್ ಆಗಿದ್ದು, ಡಿಕೆಶಿ ಮತ್ತು ಜಾರಕಿಹೊಳಿ ಮಧ್ಯೆ ಸಂಧಾನ ನಡೆದಿದೆ. ಜೊತೆಗೆ, ಮಂಗಳೂರಿನಲ್ಲಿ ಬ್ಯಾಂಕ್ ದರೋಡೆಯಾಗಿ 15 ಕೋಟಿ ಚಿನ್ನಾಭರಣ ಲೂಟಿಯಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.17): ಕೆಪಿಸಿಸಿ ಪವರ್​ ಫೈಟ್​ ಬೆಳಗಾವಿಗೆ ಶಿಫ್ಟ್ ಆಗಿದೆ. ಡಿಕೆಶಿ-ಜಾರಕಿಹೊಳಿ ಮಧ್ಯೆ ಸಂಧಾನಕ್ಕೆ ಸುರ್ಜೇವಾಲ ಪ್ರಯತ್ನಿಸಿದ್ದಾರೆ. ಇಡೀ ದಿನ ಮೂವರು ನಾಯಕರ ಮಧ್ಯೆ ಒನ್​ ಟು ಒನ್ ಮೀಟಿಂಗ್ ನಡೆದಿದೆ.ಇದರ ನಡುವೆ ಆಪ್ತರೆದುರು ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದು ಸಿಎಂ ಹೇಳಿದ್ದಾರೆ.

ಕಾಂಗ್ರೆಸ್ ಆಂತರಿಕ ಕಚ್ಚಾಟದ ಭಾಗವಾಗಿದ ಶೀಘ್ರವೇ ಜಾರಕಿಹೊಳಿ ಬಣದ 15 ಶಾಸಕರು ದುಬೈಗೆ ಹೋಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಾಯಿ ಮುಚ್ಕೊಂಡು ಕೆಲಸ ಮಾಡಿ ಎಂದುವಾರ್ನಿಂಗ್ ಕೊಟ್ಟಿದ್ದಾರೆ.

Belagavi: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀ, ಹಾಜರಿದ್ದ ಡಿಕೆ ಶಿವಕುಮಾರ್!

ಇನ್ನು, ಬೀದರ್​ ಬಳಿಕ ಮಂಗಳೂರಿನಲ್ಲೂ ಬ್ಯಾಂಕ್ ದರೋಡೆಯಾಗಿದೆ. ಆರೇ ನಿಮಿಷದಲ್ಲೇ 15 ಕೋಟಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಗನ್​ ತೋರಿಸಿ ಗೋಣಿಚೀಲದಲ್ಲಿ ಎಲ್ಲ ಕಟ್ಟಿಕೊಂಡು ಪರಾರಿಯಾಗಿದ್ದಾರೆ.

Related Video