Asianet Suvarna News Asianet Suvarna News

ಆರ್‌ಆರ್‌ ನಗರ ರಣ ಕಣ; ನಂದಿನಿ ಲೇಔಟ್ ಠಾಣೆ ಮುಂದೆ ಹೈಡ್ರಾಮಾ!

ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘೋಷಣೆ ಸಮರ/ ಮುನಿರತ್ನ ಬಂಧನವಾಗಬೇಕು ಎಂದ ಕೈ ಕಾರ್ಯಕರ್ತರು/ ಡಿಕೆ ಸುರೇಶ್ ಮೇಲೆ ಬಿಜೆಪಿ ಕಾರ್ಯಕರ್ತರ ಆರೋಪ

ಬೆಂಗಳೂರು(ಅ. 21)  ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿ  ನಂದಿನಿ ಲೇಔಟ್ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘೋಷಣೆಗಳ ಸಮರ ನಡೆದಿದೆ.

ಕನಕಪುರದ ಇತಿಹಾಸ ಗೊತ್ತಿಲ್ಲವೆ; ಡಿಕೆಶಿಗೆ ಎಚ್‌ ಡಿಕೆ ಗುನ್ನಾ

ಆರ್ ಆರ್ ನಗರದಲ್ಲಿ ಉಪಚುನಾವಣೆ ನಡೆಯುತ್ತಿದ್ದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಎರಡು ಪಕ್ಷದ ನಾಯಕರು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿದೆ.