Asianet Suvarna News Asianet Suvarna News

Mutalik: ಕಾರ್ಕಳದಲ್ಲಿ ಸುನೀಲ್ ಕುಮಾರ್ ವಿರುದ್ಧ ಮುತಾಲಿಕ್ ಕಾದಾಟ: ಕ್ಷೇತ್ರ ಬಿಡುವಂತೆ ಸಲಹೆ

ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಿದ್ಧತೆ ನಡೆಸಿದ್ದು, ಸಚಿವ ಸುನೀಲ್ ಕುಮಾರ್'ಗೆ ಬೇರೆ ಕಡೆ ಸ್ಪರ್ಧೆ ಮಾಡಲು ಸಲಹೆ ನೀಡಿದ್ದಾರೆ.
 

ಕಾರ್ಕಳದಲ್ಲಿ ಗುರು-ಶಿಷ್ಯರ ಕಾಳಗ ಏರ್ಪಟ್ಟಿದ್ದು, ಸಚಿವ ಸುನೀಲ್‌ ಕುಮಾರ್‌ ವಿರುದ್ಧ ತೊಡೆ ತಟ್ಟಲು ಪ್ರಮೋದ್ ಮುತಾಲಿಕ್ ಸಿದ್ಧತೆ ನಡೆಸಿದ್ದಾರೆ. ಕಾರ್ಕಳದಲ್ಲಿ ಸುನೀಲ್ ಕುಮಾರ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುತಾಲಿಕ್‌ ತಯಾರಿ ನಡೆಸಿದ್ದಾರೆ. 'ನಿನ್ನ ಬೆಳಸಿದ ಗುರು ಬಂದಿದ್ದಾರೆ ಎಂದು ಕ್ಷೇತ್ರ ತ್ಯಾಗ ಮಾಡಿ,  ನಿಮ್ಮಲ್ಲಿ ನಿಜ ಹಿಂದುತ್ವ, ಆರ್‌ಎಸ್‌ಎಸ್‌ ಬದ್ಧತೆ ಇದ್ದರೆ ಕ್ಷೇತ್ರ ಬಿಡು. ಐದು ವರ್ಷದ ನಂತರ ನಿಮ್ಮನ್ನೇ ಈ ಕ್ಷೇತ್ರದಲ್ಲಿ  ನಿಲ್ಲಿಸುತ್ತೇನೆ ಎಂದು ಕಾರ್ಕಳದಲ್ಲಿ  ಸಚಿವ ಸುನೀಲ್‌ ಕುಮಾರ್‌ ವಿರುದ್ಧ ಮುತಾಲಿಕ್ ಗುಡುಗಿದ್ದಾರೆ.

ವರ್ಗಾವಣೆಯಲ್ಲಿ ಸರ್ಕಾರದ ಕುತಂತ್ರ: ಪೃಥ್ವಿ ರೆಡ್ಡಿ

Video Top Stories