Asianet Suvarna News Asianet Suvarna News

Pratham Paryatane: 'ನಿಖಿಲ್‌ ಗೆಲ್ತಾರೆ, ಕುಮಾರಣ್ಣ ಸಿಎಂ ಆಗ್ತಾರೆ'; ರಾಮನಗರದ ಜನರು ಹೇಳಿದ್ದೇನು?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಈ ಕುರಿತು ರಾಮನಗರದಲ್ಲಿ ನಟ ಒಳ್ಳೆಯ ಹುಡುಗ ಪ್ರಥಮ್ ಗ್ರೌಂಡ್ ರಿಪೋರ್ಟ್ ನಡೆಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ನಟ ಪ್ರಥಮ್ ಗ್ರೌಂಡ್ ರಿಪೋರ್ಟ್ ನಡೆಸಿದ್ದು, ಪ್ರಸ್ತುತ ರಾಜಕೀಯ ಸ್ಥಿತಿಗತಿ ಕುರಿತು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಕುಮಾರಸ್ವಾಮಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ‌. ಈಗ ನಿಖಿಲ್‌ ಕುಮಾಸ್ವಾಮಿ ಏನೂ ಮಾಡುತ್ತಾರೆ ಎಂದು ನೋಡಬೇಕು ಎಂದು ಹೇಳಿದ್ದಾರೆ. ಕುಮಾರಸ್ವಾಮಿ ರಾಮನಗರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ. ಬಿಜೆಪಿಯವರು ಒಂದು ಅನುದಾನವನ್ನು ರಾಮನಗರಕ್ಕೆ ಕೊಟ್ಟಿಲ್ಲ. ರಾಮನಗರದಲ್ಲಿ ನಿಖಿಲ್‌ ಗೆಲ್ಲುತ್ತಾರೆ ಹಾಗೂ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು ತಿಳಿಸಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎ‌ಸ್'ಗೆ ಮೆಜೊರಿಟಿ ಇದೆ, ಬಿಜೆಪಿ ಬರಲ್ಲ ಎಂದು ಜನಾಭಿಪ್ರಾಯದಲ್ಲಿ ತಿಳಿಸಲಾಗಿದೆ.

ಹಾಸನ ವಿಚಾರದಲ್ಲಿ ತಲೆ ಹಾಕಬೇಡಿ: ಹೆಚ್‌ಡಿಕೆಗೆ ಸೂರಜ್‌ ರೇವಣ್ಣ ತಿರುಗೇಟು

Video Top Stories