
ಗಣಿ ನಾಡಿನಲ್ಲಿ 'ನಮೋ' ಕಹಳೆ: ಮಾರ್ಚ್ 2ನೇ ವಾರದಲ್ಲಿ ಆಗಮನ?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಅಖಾಡಕ್ಕೆ ವೇದಿಕೆ ಸಿದ್ಧವಾಗಿದ್ದು, ಕರ್ನಾಟಕ ಕುರುಕ್ಷೇತ್ರದಲ್ಲಿ ಕೇಸರಿ ನಾಯಕರ ಅಬ್ಬರ ಜೋರಾಗಿ ಶುರುವಾಗಿದೆ.
ಗಣಿ ನಾಡು ಬಳ್ಳಾರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸುನಾಮಿ ಬೀಸಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಕ ಸಂಡೂರಿಗೆ ಪ್ರಧಾನಿ ಮೋದಿ ಎಂಟ್ರಿ ಕೊಡಲಿದ್ದಾರೆ. ಪ್ರಧಾನಿ ಮೋದಿ ಕರೆಸಲು ಸಚಿವ ಶ್ರಿರಾಮಲು ಪ್ಲಾನ್ ನಡೆಸಿದ್ದು, ಮೈನಿಂಗ್ ಸ್ಕೂಲ್ ಭೂಮಿ ಪೂಜೆಗೆ ಮೋದಿ ಆಗಮನದ ನಿರೀಕ್ಷೆ ಇದೆ. ಫೆಬ್ರವರಿ 23ರಂದು ಸಂಡೂರಿಗೆ ಅಮಿತ್ ಶಾ ಆಗಮಿಸಲಿದ್ದಾರೆ. ಮಾರ್ಚ್ 2ನೇ ವಾರದಲ್ಲಿ ನರೇಂದ್ರ ಮೋದಿ ಆಗಮನ ಸಾಧ್ಯತೆ ಇದೆ.
Add Asianetnews Kannada as a Preferred Source
