
ಎಲೆಕ್ಷನ್ ಗಿಮಿಕ್: ಬಳ್ಳಾರಿಯಲ್ಲಿ ಹಕ್ಕುಪತ್ರ ವಿತರಣೆಗೆ ಮುಂದಾದ ಶಾಸಕ ಸೋಮಶೇಖರ್ ರೆಡ್ಡಿ
ಬಳ್ಳಾರಿಯಲ್ಲಿ ಈಗಾಗಲೇ ಕಾಂಗ್ರೆಸ್ ಆಕಾಂಕ್ಷಿ ಭರತ್ ರೆಡ್ಡಿ ನಗರದಲ್ಲಿ ಕುಕ್ಕರ್ ಹಂಚಿದ್ದಾಯ್ತು, ಇದೀಗ ಹಾಲಿ ಶಾಸಕ ಸೋಮಶೇಖರ್ ರೆಡ್ಡಿ ಹಕ್ಕು ಪತ್ರ ವಿತರಣೆ ಮಾಡಲು ಮುಂದಾಗಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಜನರ ಮನವೊಲಿಸಲು ಬಳ್ಳಾರಿ ನಾಯಕರ ಭರ್ಜರಿ ಗಿಮಿಕ್ಸ್ ಶುರು ಮಾಡಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿರೋ ಹಕ್ಕು ಪತ್ರ ವಿತರಣೆ ಮಾಡಲು ಸೋಮಶೇರ್ ರೆಡ್ಡಿ ಮುಂದಾಗಿದ್ದು, ಸ್ಲಂ ಬೋರ್ಡ್ ಮೂಲಕ ಹನ್ನೆರಡು ಸಾವಿರಕ್ಕೂ ಹೆಚ್ಚು ಪಟ್ಟಾ ವಿತರಣೆ ಕೆಲಸ ಪೆಂಡಿಂಗ್ ಇತ್ತು. ಇದಕ್ಕೆ ಅಂತಿಮ ಮೊಹರು ಹಾಕೋ ಮೂಲಕ ಚುನಾವಣೆ ಪ್ರಚಾರ ಕಣಕ್ಕೆ ಚಾಲನೆ ನೀಡಿದ್ದಾರೆ ರೆಡ್ಡಿ. ಹನ್ನೆರಡು ಸಾವಿರಕ್ಕೂ ಹೆಚ್ಚು ಮನೆ ಮನೆಗೂ ಹೋಗಲಿರೋ ರೆಡ್ಡಿ ಮೊದಲ ಹಂತದ ಪ್ರಚಾರ ಕಂಪ್ಲೀಟ್ ಮಾಡಲಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ