
karnataka Election: ನಾಳೆ ದಕ್ಷಿಣ ಕನ್ನಡದಲ್ಲಿ ಅಮಿತ್ ಶಾ ಸಂಚಾರ: 'ಕ್ಯಾಂಪ್ಕೋ'ವನ್ನು ಬಿಜೆಪಿ ಸಮಾವೇಶ ಮಾಡಲು ಪ್ಲಾನ್
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಅಖಾಡ ರಂಗೇರಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ಮತ್ತೊಮ್ಮೆ ಎಂಟ್ರಿ ಕೊಡುತ್ತಿದ್ದಾರೆ.
ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ನಡೆಸಿದ್ದು, ನಾಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಮಿಂಚಲಿದ್ದಾರೆ. ಕ್ಯಾಂಪ್ಕೋ ಸಮಾವೇಶವನ್ನು ಬಿಜೆಪಿ ಸಮಾವೇಶವಾಗಿಸಲು ನಾಯಕರ ಪ್ಲಾನ್ ಮಾಡಿದ್ದು, ಸುಮಾರು 5.30 ಗಂಟೆಗಳ ಕಾಲ ಜಿಲ್ಲೆಯಲ್ಲಿ ಅಮಿತ್ ಶಾ ಸಂಚಾರ ಮಾಡಲಿದ್ದು, ಹಲವು ಕಾರ್ಯಕ್ರಮದ ಮೂಲಕ ಕರಾವಳಿ ಬಿಜೆಪಿಗೆ ಶಾ ಬೂಸ್ಟ್ ನೀಡಲಿದ್ದಾರೆ. ಪುತ್ತೂರಿನ ಈಶ್ವರಮಂಗಳ ಹನುಮಗಿರಿ ದೇವಸ್ಥಾನಕ್ಕೂ ಭೇಟಿ ನೀಡಲಿದ್ದು, ನಾಳೆ ಸಂಜೆ ಅಂತಿಮವಾಗಿ ಮಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಲಿದ್ದಾರೆ.
Add Asianetnews Kannada as a Preferred Source
