Asianet Suvarna News Asianet Suvarna News

ಹಾವೇರಿಯಲ್ಲಿ ಕುಕ್ಕರ್‌ ಪಾಲಿಟಿಕ್ಸ್: ಎಂಎಲ್‌ಸಿ ಆರ್. ಶಂಕರ್'ರಿಂದ 'ಬೇಳೆ' ಬೇಯಿಸುವ ಪ್ರಯತ್ನ

ಹಾವೇರಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ  ಕುಕ್ಕರ್‌ ಪಾಲಿಟಿಕ್ಸ್‌ ಶುರುವಾಗಿದೆ.
 

ಮಾಜಿ ಸಚಿವ ಹಾಗೂ ರಾಣಿಬೆನ್ನೂರು ಬಿಜೆಪಿ ಟಿಕೆಟ್‌ ಆಕಾಂಕ್ಷಿ ಆರ್‌. ಶಂಕರ್‌ ಮತದಾರರಿಗೆ ಕುಕ್ಕರ್‌ ಗಿಫ್ಟ್‌ ನೀಡುತ್ತಿದ್ದಾರೆ.  ಕುಕ್ಕರ್‌'ನಿಂದ ಬೇಳೆ ಬೇಯಿಸುವ ಪ್ರಯತ್ನ ನಡೆಸಿದ್ದು, ಮನೆ ಮನೆಗೆ ತೆರಳಿ ಶಂಕರ್‌ ಬೆಂಬಲಿಗರಿದ ಕೂಪನ್ ನೀಡಲಾಗುತ್ತಿದೆ. ಕೂಪನ್ ತೋರಿಸಿದ್ರೆ ಜನರಿಗೆ ಕುಕ್ಕರ್‌ ಸಿಗಲಿದೆ. ಕುಕ್ಕರ್‌ ಮೇಲೆ ಸದಾ ನಿಮ್ಮ ಸೇವೆಗಾಗಿ ನಿಮ್ಮ ಮನೆ ಮಗ ಎಂಬ ಬರಹವಿದೆ.

Video Top Stories