Asianet Suvarna News Asianet Suvarna News

ಗೊಂದಲದ ಗೂಡಾದ ಅರಸೀಕೆರೆ ಕ್ಷೇತ್ರ: ಜೆಡಿಎಸ್‌ನಿಂದ ಶಾಸಕ ಶಿವಲಿಂಗೇಗೌಡ ದೂರ ದೂರ

ಅರಸೀಕೆರೆ ಕ್ಷೇತ್ರವು ದಳಪತಿಗಳಿಗೆ ಗೊಂದಲದ ಗೂಡಾಗಿದ್ದು, ಜೆಡಿಎಸ್‌ನಿಂದ ಶಾಸಕ ಶಿವಲಿಂಗೇಗೌಡ ಅಂತರ ಕಾಯ್ದುಕೊಂಡಿದ್ದಾರೆ.
 

ಜೆಡಿಎಸ್ ಭದ್ರಕೋಟೆಯಲ್ಲಿ ಬಿರುಕು ಮುಂದುವರೆದಿದ್ದು, ಜೆಡಿಎಸ್‌ ಸಭೆ ಸಮಾರಂಭಗಳಿಂದ ಶಾಸಕ ಶಿವಲಿಂಗೇಗೌಡ ದೂರ ಉಳಿದಿದ್ದಾರೆ. ಶಿವಲಿಂಗೇಗೌಡರ ಅಸಮಧಾನ ಬೆನ್ನಲ್ಲೇ ಹಾಸನಕ್ಕೆ ಹೆಚ್‌.ಡಿ ಕುಮಾರಸ್ವಾಮಿ ಎಂಟ್ರಿ ಕೊಡುತ್ತಿದ್ದು, ಶಿವಲಿಂಗೇಗೌಡಗೆ ಟಾಂಗ್‌ ನೀಡಲು ಸಜ್ಜಾಗಿದ್ದಾರೆ. ಫೆಬ್ರವರಿ 12ರಂದು ಅರಸೀಕೆರೆಯಲ್ಲಿ ಜೆಡಿಎಸ್‌ ರಣಕಹಳೆ ಊದಿದ್ದು, ಜೆಡಿಎಸ್‌ ಪಂಚರತ್ನ ಯಾತ್ರೆ ವೇಳೆ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಹೆಚ್‌ಡಿಕೆ ಸಭೆಗೆ ಶಾಸಕ ಶಿವಲಿಂಗೇಗೌಡ ಗೈರಾಗುವ ಸಾಧ್ಯತೆ ಇದ್ದು, ಅವರಿಗೆ ಫೆ. 12ರವರೆಗೆ ಗಡುವು ನೀಡಲಾಗಿದೆ.

ಭೂಕಂಪಕ್ಕೆ ಬೆಚ್ಚಿ ಬಿದ್ದ ಟರ್ಕಿ & ಸಿರಿಯಾ: ಸ್ಮಶಾನವಾದ ಮಧ್ಯಪ್ರಾಚ್ಯ ರಾಷ್ಟ್ರಗಳು

Video Top Stories