BJP Janasankalpa Yatre: ಜೀವರಾಜ್, ಪರವಾಗಿಲ್ವಪ್ಪಾ.. 2023ಕ್ಕೆ ದಾಟುತ್ತೀಯ: ಸಿಎಂ ಬೊಮ್ಮಾಯಿ ಮೆಚ್ಚುಗೆ

ಕೊಪ್ಪದಲ್ಲಿ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಯಲ್ಲಿಯೂ ಹೆಚ್ಚಿನ ಜನರು ಸೇರಿರುವುದನ್ನು ಕಂಡ  ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಜೀವರಾಜ್‌, ಪರ್ವಾಗಿಲ್ಲಪ್ಪಾ.. 2023 ದಾಟುತ್ತೀಯಾ.. ಬ್ಯಾಟರಿ ಫುಲ್‌ ಚಾರ್ಜ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ನ.27) : ರಾಜ್ಯಾದ್ಯಂತ ಜನಸಂಕಲ್ಪ ಕಾರ್ಯಕ್ರಮವನ್ನು ಮಾಡುತ್ತಿದ್ದು, ಕಲಬುರಗಿಯಿಂದ ಆರಂಭವಾಗಿ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಪೂರ್ಣಗೊಂಡು ಈಗ ಮಲೆನಾಡಿನತ್ತ ಬಂದಿದ್ದೇವೆ. ನಾವು ಬದುಕಿಗಾಗಿ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ನಾವು ಮಾಡುತ್ತಾ ಬಂದಿದ್ದೇವೆ. ಜೀವರಾಜ್‌, ಪರ್ವಾಗಿಲ್ಲಪ್ಪಾ.. 2023 ದಾಟುತ್ತೀಯಾ.. ಬ್ಯಾಟರಿ ಫುಲ್‌ ಚಾರ್ಜ ಇದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾರದಾಂಬೆ ನೆಲೆಗೊಂಡಿರುವ ಪುಣ್ಯ ಭೂಮಿ ಇದಕ್ಕಿಂತ ಏನೂ ಬೇಕು. ಶೃಂಗೇರಿಯ ಹೆಸ್ರನ್ನು ಜಗತ್ತಿಗೆ ಪ್ರಸಿದ್ದಿ ಮಾಡಲು ಸಂಕಲ್ಪ ತೊಟ್ಟು ಸಂಕಲ್ಪ ಯಾತ್ರೆಗೆ ಬಂದಿದ್ದೇವೆ. ಕಳೆದ 70 ವರ್ಷ ನೀರು ಕೊಡದವರು ನಮ್ಮ ಆಳಿದ್ದರು, ಅವರು ಬದುಕು ಕಟ್ಟಿಕೊಡುತ್ತಾರಾ? ಎಲ್ಲಾ ಸಮಯದಲ್ಲೂ ಮೋಸ ಮಾಡಲು ಆಗಲ್ಲ, ಜನರು ಬದಲಾಗಿದ್ದಾರೆ. ಅಭಿವೃದ್ಧಿ ಪಥದಲ್ಲಿರುವ ಬಿಜೆಪಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Related Video