Asianet Suvarna News Asianet Suvarna News

ಅದೊಂದು ಮಾತುಕತೆ, ತಂಡದೊಂದಿಗೆ ಬಿಜೆಪಿಗೆ ಜೆಡಿಎಸ್ ಮಾಸ್ ಲೀಡರ್?

ಜೆಡಿಎಸ್‌ ಗೆ ಹೊಸ ಸಂಕಷ್ಟ/ ಈ ಬೆಳವಣಿಗೆಯಿಂದ ದಳಪತಿಗಳು ಕಂಗಾಲು/ ಬಿಎಸ್ ವೈ ಜನ್ಮದಿನದ ವೇಳೆ ಶಾಕ್ ಮೇಲೆ ಶಾಕ್/ ಜೆಡಿಎಸ್‌ಗೆ ನಡುಕ ತಂದ ಹಳೇ ಮೈಸೂರು ಭಾಗದ ಬೆಳವಣಿಗೆ

ಬೆಂಗಳೂರು(ಮಾ. 01) ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನ ಮುಕ್ತಾಯವಾಗಿದ್ದರೆ ಇತ್ತ ಜೆಡಿಎಸ್ ಗೆ ಶಾಕಿಂಗ್ ಸುದ್ದಿಯೊಂದು ಎದುರಾಗಿದೆ. ಹಳೆ ಮೈಸೂರು ಭಾಗದಲ್ಲಿ ದೊಡ್ಡದೊಂದು ಹೊಡೆತ ಬೀಳುವ ಸಾಧ್ಯತೆ ಎದುರಾಗಿದೆ.

ದೇವೇಗೌಡರಿಗೆ ಸಿಟಿ ರವಿ ರಾಜಕೀಯ ಪಾಠ!

ಜೆಡಿಎಸ್ ಹಿರಿಯ ನಾಯಕ ಜಿಟಿ ದೇವೇಗೌಡ ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಬಹಳ ಹಿಂದಿನಿಂದಲೇ ಕೇಳಿ ಬಂದಿದ್ದವು. ಈಗ  ಬಿಎಸ್ ವೈ ಜನ್ಮದಿನದ ಸಂದರ್ಭ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ.