
ಕೈ- ಕಮಲ ಪಾಳಯದಿಂದ ಹೊರಬಂದ ಘಟಾನುಘಟಿಗಳು: ಟಿಕೆಟ್ ನೀಡಿ ದಾಳ ಉರಿಳಿಸಿದ ಜೆಡಿಎಸ್
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಟಿಕೆಟ್ ಸಿಗದ ನಾಯಕರು ಜೆಡಿಎಸ್ನತ್ತ ಮುಖಮಾಡಿದ್ದು, ಅವರನ್ನು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲಾಗಿದೆ. ಇದರಿಂದ ಜೆಡಿಎಸ್ಗೆ ಎಷ್ಟು ಲಾಭವಾಗಲಿದೆ ಎಂಬುದು ಇನ್ನೂ ತಿಳಿದಿಲ್ಲ.
ರಾಜ್ಯ ರಾಜಕಾರಣದಲ್ಲಿ ಯಾರೂ ಊಹಿಸದ ಘಟನೆಗಳು ನಡೆಯುತ್ತಿವೆ. ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನ ಬಾಕಿ ಇದೆ. ಹಾಗಾಗಿ ಮತದಾರನ ಮನಗೆಲ್ಲೋಕೆ ಎಲ್ಲಾ ಪಕ್ಷಗಳು ಕಸರತ್ತು ಮಾಡುತ್ತಿವೆ. ಇನ್ನೂ ಟಿಕೆಟ್ ನೀಡುವ ವೇಳೆ ರಾಷ್ಟ್ರೀಯ ಪಕ್ಷಗಳು ತಂತ್ರವನ್ನು ಹೂಡಿದ್ದು, ಬಂಡಾಯವೆದ್ದ ನಾಯಕರು ಜೆಡಿಎಸ್ನತ್ತ ಮುಖ ಮಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಗೇಟ್ಪಾಸ್ ಕೊಟ್ಟ ಹಳೇ ಹುಲಿಗಳಿಗೆ ಜೆಡಿಎಸ್ ಹೂಮಾಲೆ ಹಾಕಿ ಸ್ವಾಗತಿಸಿದೆ. ಇದು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ವರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಸಿದ್ದು ಸ್ವ ಕ್ಷೇತ್ರದಲ್ಲಿ ಜಂಪಿಂಗ್ ಪಾಲಿಟಿಕ್ಸ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು