Asianet Suvarna News Asianet Suvarna News

ಬಳ್ಳಾರಿಯಲ್ಲಿ ಗಣಿಧಣಿ ಶಕ್ತಿ ಪ್ರದರ್ಶನ: ಜ. 11ರಂದು ಬೃಹತ್ ರಾಜಕೀಯ ಸಮಾವೇಶ

ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಜನಾರ್ಧನ ರೆಡ್ಡಿ ಚುನಾವಣೆ ರಣಕಹಳೆ ಊದಿದ್ದು, ಜನವರಿ 11ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ.
 

ತವರು ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಗಣಿಧಣಿ ಜನಾರ್ದನ ರೆಡ್ಡಿ ಸಜ್ಜಾಗಿದ್ದು, ಬಳ್ಳಾರಿಯಲ್ಲಿ ಬೃಹತ್ ರಾಜಕೀಯ ಸಮಾವೇಶ ನಡೆಯಲಿದೆ. ಜನವರಿ 11ರಂದು ಗಾಲಿ ಜನಾರ್ದನ ರೆಡ್ಡಿ ಹುಟ್ಟುಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸುಪ್ರೀಂ ಆದೇಶದ ಹಿನ್ನೆಲೆ ರೆಡ್ಡಿ ಬಳ್ಳಾರಿ ಪ್ರವೇಶಿಸುವಂತಿಲ್ಲ. ಹೀಗಾಗಿ ವರ್ಚುವಲ್‌ ಮೂಲಕ ಸಮಾವೇಶಕ್ಕೆ ರೆಡ್ಡಿ ಚಾಲನೆ ನೀಡಲಿದ್ದಾರೆ. ಇದರ ಉಸ್ತುವಾರಿಯನ್ನು ಅವರ ಪತ್ನಿ ಅರುಣಾ ಲಕ್ಷ್ಮಿ ವಹಿಸಿಕೊಂಡಿದ್ದು, ಬಿಜೆಪಿಯಿಂದ ಹಲವು ಮುಖಂಡರು ರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ದಮ್ಮೂರು ಶೇಖರ್‌ ಸೇರಿ ಹಲವರು ಸೇರ್ಪಡೆಯಾಗಿದ್ದಾರೆ.
Assembly Election 2023: ಅಮಿತ್ ಶಾ ಕರ್ನಾಟಕ ಭೇಟಿ: ರಾಜ್ಯದಲ್ಲಿ ಚಾ ...

Video Top Stories