
ಬೆಂದ ಬದುಕಿನಲ್ಲಿ ಎದ್ದು ನಿಂತ ಖರ್ಗೆ: ಇದು ಕಾಂಗ್ರೆಸ್ ಶಿಸ್ತಿನ ಸಿಪಾಯಿಯ ಕತೆ
ಮಲ್ಲಿಕಾರ್ಜುನ ಖರ್ಗೆ ಇದೀಗ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವ ಹಾದಿಯಲ್ಲಿದ್ದಾರೆ. ಅವರು ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದು ನಿಂತ ನಾಯಕ. ಅವರು ಬೆಳೆದು ನಿಂತ ದಾರಿ ನಿಜಕ್ಕೂ ರೋಚಕ.
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗೋದು ಬಹುತೇಕ ಖಚಿತವಾಗಿದ್ದು, ಇಷ್ಟು ಎತ್ತರಕ್ಕೆ ಬೆಳೆದ ಅವರ ಸಾಧನೆ ನಿಜಕ್ಕೂ ರೋಚಕ. ಕಲ್ಲು ಮುಳ್ಳಿನ ಹಾದಿಯಲ್ಲಿ ಖರ್ಗೆ ಬೆಳೆದು ನಿಂತಿದ್ದು, ರಜಾಕಾರರ ದಾಳಿಗೆ ಅವರ ಇಡೀ ಕುಟುಂಬವೇ ಭಸ್ಮವಾಗಿತ್ತು. ಹುಟ್ಟಿನಿಂದಲೇ ಇಂತಹ ಕಷ್ಟಗಳಿಂದ ಬೆಳೆದು ಬಂದ ಅವರು, ಇಂದು ಸ್ವಂತ ಶಕ್ತಿಯಿಂದ ಇಲ್ಲಿಯವರೆಗೆ ಬಂದು ನಿಂತಿದ್ದಾರೆ. ಅವರೊಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಗಾಂಧಿ ಕುಟುಂಬದ ಪರಮ ನಿಷ್ಠರಾಗಿದ್ದಾರೆ. ಇವರು ಎಐಸಿಸಿ ಅಧ್ಯಕ್ಷರಾಗಿ ರಬ್ಬರ್ ಸ್ಟ್ಯಾಂಪ್ ಆಗ್ತಾರಾ ಅಥವಾ ಅಧಿಕಾರದ ಖದರ್ ತೋರಿಸ್ತಾರಾ ಅನ್ನುವುದು ಕಾದು ನೋಡಬೇಕಿದೆ.
Add Asianetnews Kannada as a Preferred Source
