Asianet Suvarna News Asianet Suvarna News

ಯೋಗೇಶ್ವರ್‌ಗೆ ಯೋಗ: ಸಿಎಂ ಆಪ್ತ ರೇಣುಕಾಚಾರ್ಯಗೆ ಮುಖಭಂಗ..!

ಸಿಎಂ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಏನು ಆಗಬಾರದು ಅಂದುಕೊಂಡಿದ್ರೋ ಅದೇ ಆಗ್ಬಿಟ್ಟಿದೆ.

ಬೆಂಗಳೂರು, (ಡಿ.01): ಸಿಎಂ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರು ಏನು ಆಗಬಾರದು ಅಂದುಕೊಂಡಿದ್ರೋ ಅದೇ ಆಗ್ಬಿಟ್ಟಿದೆ.

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಚಿವ ರಮೇಶ್ ಜಾರಕಿಹೊಳಿಗೆ ನಡೆಗೆ ಆಕ್ರೋಶ

ಹೌದು...ಯಾವುದೇ ಕಾರಣಕ್ಕೂ ಸೋತ ಸಿ.ಪಿ.ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಕೊಡಬಾರದು ಎಂದು ಬಹಿರಂಗವಾಗಿ ಹೇಳಿದ್ರು. ಆದ್ರೆ, ಇದೀಗ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪನವರೇ ಯೋಗೇಶ್ವರ್‌ ಅವರು ನೂರಕ್ಕೆ ನೂರು ಮಂತ್ರಿಯಾಗುತ್ತಾರೆ ಎಂದು ಹೇಳಿದ್ದಾರೆ. ಇದರಿಂದ ರೇಣುಕಾಚಾರ್ಯಗೆ ಮುಖಭಂಗವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹೀಗೆ..