ಆಗಾಗ ಸದ್ದು ಮಾಡೋದೇಕೆ ನೈಸ್ ವಿವಾದ ?: ಮೋದಿ ತನಕ ಹೋಗುತ್ತಾ NICE ಗಲಾಟೆ..?

ಮೋದಿ ಬಳಿ ಹೋಗುತ್ತಾ ಅಣ್ತಮ್ಮನ ಗಲಾಟೆ..?
ಸರ್ಕಾರಕ್ಕೆ ತಲೆನೋವಾದ್ರಾ ಕುಮಾರಸ್ವಾಮಿ..?
ಸರ್ಕಾರದ ಮೇಲೆ ಕುಮಾರಣ್ಣನ ನಿರಂತರ ದಾಳಿ

Share this Video
  • FB
  • Linkdin
  • Whatsapp

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಫ್ಯಾಮಿಲಿ ಜೊತೆ ಕೂಲ್ ಆಗಿ ಫಾರಿನ್ ಟೂರ್ ಮುಗಿಸಿಕೊಂಡು ಬಂದು ಈಗ ರಾಂಗ್ ಆಗಿದ್ದಾರೆ. ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ವಾಗ್ದಾಳಿ ನಡೆಸ್ತಿದ್ದಾರೆ. ವರ್ಗಾವಣೆ ವಿಚಾರದಿಂದ ಹಿಡಿದು ಸರ್ಕಾರದ ಪ್ರತಿಯೊಂದು ನಡೆಗಳ ಬಗ್ಗೆ ಟೀಕೆ ಮಾಡ್ತಾ ಇದ್ದಾರೆ. ಈಗ ನೈಸ್ ಪ್ರಕರಣವನ್ನ ಮೋದಿಯ(Modi) ಬಳಿ ಒಯ್ಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್(dk shivakumar) ಅಂದ್ರೆ ಕರ್ನಾಟಕ ರಾಜಕೀಯದ ಎರಡು ಅಪರೂಪದ ಅಧ್ಯಾಯ. ದೋಸ್ತಿ ಮತ್ತು ಕುಸ್ತಿ ಎರಡೂ ಕೂಡ ಈ ಇಬ್ಬರಿಗೆ ಹೊಸತೇನಲ್ಲಾ. ಒಂದು ಕಾಲದಲ್ಲಿ ಅದೇನು ದುಷ್ಮನಿ, ಅದೇನು ದ್ವೇಷ. ಅದು ಕರ್ನಾಟಕವೇ ತಿರುಗಿ ನೋಡುವಂತೆ ಮಾಡಿದ್ದ ರಾಜಕೀಯ ಶತ್ರುತ್ವ. ಇವ್ರಿಬ್ರ ಮಧ್ಯೆ ಇದ್ದದ್ದು ಕೇವಲ ರಾಜಕೀಯ ದ್ವೇಷವಲ್ಲ, ಅದನ್ನೂ ಮೀರಿದ ದುಷ್ಮನಿ. ಆದ್ರೆ ಆಜನ್ಮ ವೈರಿಗಳಂತೆ ಗುದ್ದಾಡ್ತಾ ಇದ್ದವರು ದೋಸ್ತಿಗಳಾಗಿದ್ದು ರಾಜಕಾರಣದ ಮತ್ತೊಂದು ಅಚ್ಚರಿ. ದುಷ್ಮನಿಯಾತ್ತು, ದೋಸ್ತಿಯಾಯ್ತು, ಪೈಲ್ವಾನ್'ಗಳಂತೆ ಕುಸ್ತಿಯಾಡಿದ್ದೂ ಆಯ್ತು. ಈಗ ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ಮಧ್ಯೆ ಅಣ್ತಮ್ಮ ರಗಳೆ ಶುರುವಾಗಿದೆ. ಅಣ್ಣ ರಾಂಗ್ ಆದ್ರೆ, ರಾಂಗ್ ಆಗಿರೋ ಅಣ್ಣನನ್ನು ತಮ್ಮ ಕಿಚಾಯಿಸ್ತಾ ಇದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಅತ್ತಿಗೆ ಮಲಗಿದವರು ಎದ್ದಿಲ್ಲ, ಲೋ ಬಿಪಿ ಅಂದುಕೊಂಡಿದ್ವಿ: ನಟ ಶ್ರೀಮುರುಳಿ

Related Video