ಮುಗಿಯದ 'ಬ್ರಾಹ್ಮಣ ಸಿಎಂ' ಗದ್ದಲ: ಪ್ರಲ್ಹಾದ್ ಜೋಶಿಯನ್ನು ಪಾರ್ಥೇನಿಯಂಗೆ ಹೋಲಿಸಿದ ಕುಮಾರಣ್ಣ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮುಂದುವರೆಸಿದ್ದು, ಒಳ್ಳೆಯ ಬಿತ್ತನೆಯಲ್ಲಿ ಪಾರ್ಥೇನಿಯಂ (ಕಾಂಗ್ರೆಸ್) ಹುಡುಕುವುದು ಬೇಡ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯದಲ್ಲಿ 'ಬ್ರಾಹ್ಮಣ ಸಿಎಂ' ಗದ್ದಲ ಮುಂದುವರೆದಿದ್ದು, ಕೇಂದ್ರ ಪ್ರಲ್ಹಾದ್ ಜೋಶಿ ಅವರನ್ನು ಕುಮಾರಸ್ವಾಮಿ ಪಾರ್ಥೇನಿಯಂಗೆ ಹೋಲಿಸಿದ್ದಾರೆ. ನಿತೀಶ್ ಕುಮಾರ್ ಡಿಎನ್ಎ ಬಗ್ಗೆ ಚರ್ಚೆ ಆಗಿಲ್ವಾ ಎಂದು ಪ್ರಶ್ನೆ ಕೇಳಿದ್ದು, ಬಿಜೆಪಿ ಮತ್ತು ಜೋಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಠ್ಯ ಪುಸ್ತಕ ತಿರುಚಿದ್ರು, ಟಿಪ್ಪು ಬಗ್ಗೆ ಪ್ರಸ್ತಾಪ ಮಾಡಿ ಕಲುಷಿತ ವಾತಾವರಣ ನಿರ್ಮಾಣ ಮಾಡಿದ್ರು. ಆ ಕಾರಣಕ್ಕೆ ಎಚ್ಚರಿಕೆ ಇಂದ ಇರಿ ಎಂದು ಹೇಳಿದ್ದೇನೆ ಎಂದು ಹೆಚ್ಡಿಕೆ ತಿಳಿಸಿದ್ದಾರೆ.