'ಗಂಡಸ್ತನದ ರಾಜಕೀಯ ಮಾಡಿ..' ಡಿಕೆಶಿ-ಎಚ್‌ಡಿಕೆ ನಡುವೆ ನಾನಾ ನೀನಾ ಟಾಕ್​ಫೈಟ್!

ಒಕ್ಕಲಿಗ ನಾಯಕರ ನಡುವೆ ನಾನಾ ನೀನಾ ಟಾಕ್​ಫೈಟ್ ಶುರುವಾಗಿದೆ.  ಬಿಜೆಪಿ ಜೆಡಿಎಸ್​ನದ್ದು ಪಾಪದ ಯಾತ್ರೆ ಎಂದು ಡಿಕೆಶಿ ಡಿಚ್ಚಿ ಹೊಡೆದಿದ್ದಾರೆ. ಇದಕ್ಕೆ ಗಂಡಸ್ಥನದ ರಾಜಕೀಯ ಮಾಡಿ ಎಂದು ದಳಪತಿ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ಆ.9): ಮೈಸೂರಿನ ಪ್ರಮುಖ ಸರ್ಕಲ್​ಗಳಲ್ಲಿ ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ’ ಹೆಸೆರಿನಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಭಾರಿ ವಿವಾದಕ್ಕೆ ಕಾರಣವಾಯ್ತು. ಈ ಫ್ಲೆಕ್ಸ್​ನಲ್ಲಿ ಕುಮಾರಸ್ವಾಮಿಗೆ ಮುಡಾ ಕೊಟ್ಟ ಸೈಟ್​ ಹಾಗೂ ಡಿ-ನೋಟಿಫಿಕೇಷನ್ ವಿವರ ಉಲ್ಲೇಖಿಸಿದ್ದು ದಳಪತಿಗಳ ಕೆಂಗಣ್ಣಿಗೆ ಕಾರಣವಾಯಿತು. ಹೀಗಾಗಿ ಫ್ಲೆಕ್ಸ್ ತೆರವು ಮಾಡುವಂತೆ ಜೆಡಿಎಸ್ ನಾಯಕ ಸಾರಾ ಮಹೇಶ್​ ಪ್ರತಿಭಟನೆ ನಡೆಸಿದ್ದರು.

ಡಿಕೆಶಿ ಆರೋಪಗಳಿಗೆ ಕೆರಳಿ ಕೆಂಡವಾದ ಕೇಂದ್ರ ಸಚಿವ ಕುಮಾರಸ್ವಾಮಿ, ಡಿಕೆಶಿ ಗಂಡಸ್ತನದ ರಾಜಕಾರಣ ಮಾಡಲಿ. ನನ್ನ ಕುಟುಂಬದ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ. ನಪುಂಸಕರ ರಾಜಕಾರಣ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಫಸ್ಟ್ ನಮ್ಮದೇನಿದೆ ಬಿಚ್ಚಿ; ನಿಮ್ಮದೇನಿದೆ ನಾವು ಬಿಚ್ತೇವೆ' ಡಿಕೆಶಿ-ಎಚ್‌ಡಿಕೆ ನಡುವೆ ನಿಲ್ಲದ ಆಸ್ತಿ ಕುಸ್ತಿ!

ಡಿಕೆಶಿ ಮೊದಲು ನೆಟ್ಟಗೆ ಬದುಕೋದನ್ನು ಕಲಿಯಲಿದೆ. ಎಲ್ಲಿದೆ 50 ಡಿನೋಟಿಫಿಕೇಶನ್‌ ಕೇಸ್‌ ಎಂದು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ. ಅವರಿಗೇನಾದರೂ ಕನಸು ಬಿದ್ದಿತ್ತಾ ಅಥವಾ ಅಜ್ಜಯ್ಯ ಹೇಳಿದ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

Related Video