
ಬಿಜೆಪಿ- ಕಾಂಗ್ರೆಸ್ ನಡುವೆ ಜೋರಾಯ್ತು ಮೊಟ್ಟೆ ಪಾಲಿಟಿಕ್ಸ್; ಮಡಿಕೇರಿ ಚಲೋಗೆ ಕೈಪಡೆ ಸಿದ್ಧತೆ
ಬಿಜೆಪಿ- ಕಾಂಗ್ರೆಸ್ ನಡುವೆ ಮೊಟ್ಟೆ ಪಾಲಿಟಿಕ್ಸ್ ಜೋರಾಗಿದೆ. ರಾಜಕೀಯ ಕಾವು ಪಡೆಯಲು ಉಭಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಬಳ್ಳಾರಿ ಪಾದಯಾತ್ರೆ ಮಾದರಿಯಲ್ಲಿ ಮಡಿಕೇರಿ ಚಲೋ ಎಂಬ ಮಹಾನಡಿಗೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ
ಬೆಂಗಳೂರು, (ಆಗಸ್ಟ್.21): ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಮೊಟ್ಟೆ ಎಸೆದಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮೊಟ್ಟೆ ಎಸೆದಿರುವ ವಿರುದ್ಧ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ಮಡಿಕೇರಿ ಚಲೋಗೆ ಕರೆ ನೀಡಿದ್ದಾರೆ.
Add Asianetnews Kannada as a Preferred Source

ಮೊಟ್ಟೆ ಗಲಾಟೆ: 26ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಬಿಜೆಪಿ ಕೌಂಟರ್
ಇದಕ್ಕೆ ಬಿಜೆಪಿ ಸಹ ಟಕ್ಕರ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೊಟ್ಟೆ ಪಾಲಿಟಿಕ್ಸ್ ಜೋರಾಗಿದೆ. ರಾಜಕೀಯ ಕಾವು ಪಡೆಯಲು ಉಭಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ. ಬಳ್ಳಾರಿ ಪಾದಯಾತ್ರೆ ಮಾದರಿಯಲ್ಲಿ ಮಡಿಕೇರಿ ಚಲೋ ಎಂಬ ಮಹಾನಡಿಗೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ.