ಬಗೆಹರಿಯದ ಟಿಕೆಟ್ ಕಗ್ಗಂಟು: ಮುನಿರತ್ನ ಪರ ಸುಧಾಕರ್ ಬ್ಯಾಟಿಂಗ್
ಆರ್ ಆರ್ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಸಚಿವ ಆರ್ ಸುಧಾಕರ್ ಮುನಿರತ್ನ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರು (ಅ. 12): ಆರ್ ಆರ್ ನಗರ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಸಚಿವ ಆರ್ ಸುಧಾಕರ್ ಮುನಿರತ್ನ ಪರ ಬ್ಯಾಟಿಂಗ್ ಮಾಡಿದ್ದಾರೆ.
ಮುಂದುವರೆದ ಉಪಚುನಾವಣಾ ಟಿಕೆಟ್ ಕಗ್ಗಂಟು; ತಡವಾಗುತ್ತಿರುವುದಕ್ಕೆ ಇದು ಕಾರಣ!
'ಮುನಿರತ್ನಗೆ ಟಿಕೆಟ್ ಕೊಟ್ರೆ ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ. ಕಾಂಗ್ರೆಸ್ ತೊರೆದ 15 ಜನರಿಗೂ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಮುನಿರತ್ನ ಟಿಕೆಟ್ ಆಕಾಂಕ್ಷಿ ಇದ್ದಾರೆ. ಅವರಿಗೆ ಟಿಕೆಟ್ ಕೊಡುವ ಸಂಬಂಧ ರಾತ್ರಿ ಇಡೀ ಚರ್ಚೆ ನಡೆದಿದೆ. ನಾವು ಕೂಡಾ ಉನ್ನತ ಮಟ್ಟದ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದೇವೆ. ಅವರಿಗೆ ಟಿಕೆಟ್ ಸಿಗುವ ಭರವಸೆ ನಮಗಿದೆ' ಎಂದು ಹೇಳಿದ್ದಾರೆ.