ಗುಜರಾತ್‌, ದೆಹಲಿ ಪಾಲಿಕೆ ಚುನಾವಣಾ ತಂತ್ರ ಅನುಸರಿಸುತ್ತಾ ಕರ್ನಾಟಕ..? ಸಂತೋಷ್ ಹೇಳಿಕೆ ಸಂಚಲನ

ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ (Assembly Election 2023) ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಬಿ ಎಲ್ ಸಂತೋಷ್ ನೀಡಿದ  ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 02): ಮೈಸೂ​ರಿನ (Mysuru) ರಿಯೋ ಮೆರೀಡಿಯನ್‌ ಹೋಟೆಲ್‌ ಸಭಾಂಗಣದಲ್ಲಿ ದಕ್ಷಿಣ ಪದವೀಧರರ ಕ್ಷೇತ್ರ ಚುನಾವಣೆ ಸಂಬಂಧ ಮುಖಂಡರ ಸಭೆಯಲ್ಲಿ ಮಾತನಾಡಿದ ಬಿ.ಎಲ್‌. ಸಂತೋಷ್‌ (BL Santosh) ದೆಹಲಿ, ಗುಜರಾತ್‌ ನಗರಪಾಲಿಕೆ ಚುನಾ​ವ​ಣೆ​ಯಲ್ಲಿ ಬಿಜೆಪಿ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ಎದುರಿಸಿದ್ದೇ​ವೆ. ಹೊಸ ಮುಖಗಳಿಗೆ ಮಣೆ ಹಾಕಿದ್ದೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿ​ದೆ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೇ ಟಿಕೆಟ್‌ ನೀಡಲಿಲ್ಲ. ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನೂ ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್‌ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂಥ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದ್ದರು. ಅಲ್ಲದೆ, ಗುಜ​ರಾ​ತ್‌​ನಲ್ಲಿ ಮುಖ್ಯ​ಮಂತ್ರಿ ಸೇರಿ ಇಡೀ ಕ್ಯಾಬಿ​ನೆಟ್‌ ಅನ್ನೇ ಪುನರ್‌ ರಚಿ​ಸಿ​ದ್ದೆವು' ಎಂದಿದ್ದಾರೆ. 

ಬಿಜೆಪಿ ಮಿಷನ್ 2023: ಕೇಂದ್ರ ನಾಯಕರ ನೇತೃತ್ವದಲ್ಲಿ ತಿಂಗಳಿಗೊಂದು ಅಭಿಯಾನ ನಿಗದಿ

 ರಾಜ್ಯ ವಿಧಾ​ನ​ಸಭೆ ಚುನಾ​ವಣೆಗೆ (Assembly Election 2023) ಒಂದು ವರ್ಷ​ವಷ್ಟೇ ಇದೆ ಎನ್ನು​ವಾಗ ಪಕ್ಷದ ರಾಷ್ಟ್ರೀಯ ಮುಖಂಡ​ರೊಬ್ಬರು ನೀಡಿದ ಈ ಹೇಳಿಕೆ​ಯನ್ನು ರಾಜ್ಯ ಬಿಜೆ​ಪಿ​ಯಲ್ಲಿ ಬದ​ಲಾ​ವ​ಣೆಯ ಸಂದೇಶ ಎಂದು ಪ್ರತಿ​ಪಕ್ಷ ಕಾಂಗ್ರೆಸ್‌ ವಿಶ್ಲೇ​ಷಿ​ಸಿ​ದರೆ, ರಾಜ್ಯ ಬಿಜೆಪಿ ಮುಖಂಡರು ಮಾತ್ರ ಆ ರೀತಿಯ ಸಾಧ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಿ​ದ್ದಾ​ರೆ.

Related Video