Asianet Suvarna News Asianet Suvarna News

ರಾಜ್ಯಸಭೆ ಎಲೆಕ್ಷನ್: ದೇವೇಗೌಡ್ರು ಕಣಕ್ಕಿಳಿಯದಿದ್ರೆ ಬದಲಾಗುತ್ತೆ ರಾಜಕೀಯ ಸೀನ್

ಕೊನೆ ಕ್ಷಣದಲ್ಲಿ ಏನಾದರೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಬಾ ಚುನಾವಣಾ ಕಣದಿಂದ ಸ್ಪರ್ಧಿಸಲು ಹಿಂದೇಟು ಹಾಕಿದರೆ ರಾಜಕೀಯ ಸೀನ್ ಬದಲಾಗಲಿದೆ. 

ಬೆಂಗಳೂರು, (ಜೂನ್, 06): ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಎದುರಾಗಿದ್ದು, ಇದೇ ಜೂನ್ 19ರಂದು ನಡೆಯಲಿದೆ. ಇದಕ್ಕೆ ಈಗಾಗಲೇ ಕಾಂಗ್ರೆಸ್ ಆಲಿಗೆ ಸಿಗುವ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕಣಕ್ಕಿಳಿಸಿದೆ. 

ಆದರೂ ಇನ್ನು ಹೆಚ್ಚುವರಿ ಮತಗಳು ಉಳಿಯುವುದರಿಂದ ದೇವೇಗೌಡ್ರು ಸ್ಪರ್ಧಿಸಿದ್ರೆ ಜೆಡಿಎಸ್‌ಗೆ ಬೆಂಬಲ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಇನ್ನು ಮತ್ತೊಂದೆ ಬಿಜೆಪಿ ಎರಡ ಸ್ಥಾನಗಳಲ್ಲಿ ಸುಲಭ ಜಯ ಸಾಧಿಸಲಿದೆ.

ರಾಜ್ಯಸಭಾ ಚುನಾವಣೆಗೆ ದೇವೇಗೌಡ ಬಹುತೇಕ ಫೈನಲ್: ಇಲ್ಲಿದೆ ಜೆಡಿಎಸ್ ಲೆಕ್ಕಾಚಾರ

 ಆದ್ರೆ, ಹೆಚ್ಚುವರಿ ಮತಗಳೊಂದಿಗೆ ಮತ್ತೊಂದು ರಾಜಕೀಯ ಆಟವಾಡಲು ಮುಂದಾಗಿದೆ. ಕೊನೆ ಕ್ಷಣದಲ್ಲಿ ಏನಾದರೂ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಬಾ ಚುನಾವಣಾ ಕಣದಿಂದ ಸ್ಪರ್ಧಿಸಲು ಹಿಂದೇಟು ಹಾಕಿದರೆ ರಾಜಕೀಯ ಸೀನ್ ಬದಲಾಗಲಿದೆ.