
Karnataka Politics:ಡಿಕೆ ಡಿಕೆ ಘೋಷಣೆ, 'ಕೈ' ಕಿತ್ತಾಟಕ್ಕೆ ತನ್ನದೇ ವ್ಯಾಖ್ಯಾನ ನೀಡಿದ ಬಿಜೆಪಿ
* ಸಿದ್ದರಾಮಯ್ಯ ಭಾಷಣೆ ಮಾಡುತ್ತಿದ್ದ ಡಿಕೆ ಘೋಷಣೆ
* ವೇದಿಕೆಯಿಂದ ಇಳಿದು ಹೊರನಡೆದ ಸಿದ್ದರಾಮಯ್ಯ
* ಇದೇ ವಿಚಾರದಲ್ಲಿ ಕಟು ಟೀಕೆ ಮಾಡಿದ ಬಿಜೆಪಿ
* ಕಾಂಗ್ರೆಸ್ ಪಕ್ಷದಲ್ಲಿ ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾತ್ರ ಸಾಕು!
ಬೆಂಗಳೂರು(ನ.17) ಕಾಂಗ್ರೆಸ್ (Congress) ಬಣ ಬಡಿದಾಟಕ್ಕೆ ಬಿಜೆಪಿ (BJP) ಠಕ್ಕರ್ ಕೊಟ್ಟಿದೆ. ಕಾಂಗ್ರೆಸ್ ನ್ನು ಟೀಕೆ ಮಾಡಿರುವ ಬಿಜೆಪಿ, ಸಭೆಯಲ್ಲೇ ಡಿಕೆ, ಡಿಕೆ (DK Shivakumar) ಅಂತ ಘೋಷಣೆ ಕೂಗಿದರೆ ಸಿದ್ದರಾಮಯ್ಯ (Siddaramaiah) ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದೆ.
Add Asianetnews Kannada as a Preferred Source

ಅಷ್ಟಕ್ಕೂ ಸಿದ್ದರಾಮಯ್ಯ ಭಾಷಣದ ನಡುವೆ ಏನಾಗಿತ್ತು)
ಸಭೆಯೊಂದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತರೇ ಡಿಕೆ, ಡಿಕೆ ಎಂದು ಘೋಷಣೆ ಕೂಗಿದ್ದರು. ಭಾಷಣ ಮಾಡುತ್ತಿದ್ದ ಜಾಗದಿಂದಲೇ ಸಿದ್ದರಾಮಮಯ್ಯ ಹೊರನಡೆದಿದ್ದರು. ಸದ್ಯ ರಾಜ್ಯ ರಾಜಕಾರಣದಲ್ಲಿ ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ.