Asianet Suvarna News Asianet Suvarna News

ಬಿಜೆಪಿ ಶಾಸಕಾಂಗ ಸಭೆ ದಿಢೀರ್‌ ರದ್ದು: ರಾಜೀನಾಮೆ ಕೊಡಲ್ವಾ ಸಿಎಂ?

* ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆ
* ಸಭೆ ನಡೆಸದಂತೆ ಸಿಎಂ ಯಡಿಯೂರಪ್ಪಗೆ ಸಲಹೆ
*  ಹೈಕಮಾಂಡ್‌ ಕರೆಯ ಮೇರೆಗೆ ಜು. 25 ರಂದು ನಡೆಯಬೇಕಿದ್ದ ಬಿಜೆಪಿ ಶಾಸಕಾಂಗ ಸಭೆ  
 

ಬೆಂಗಳೂರು(ಜು.21): ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಯಾಗುತ್ತಿದೆ. ಬಿಜೆಪಿ ಶಾಸಕಾಂಗ ಸಭೆ ಕೂಡ ದಿಢೀರ್‌ ಅಂತ ರದ್ದಾಗಿದೆ.  ಹೈಕಮಾಂಡ್‌ ಕರೆಯ ಮೇರೆಗೆ ಜು. 25 ರಂದು ಬಿಜೆಪಿ ಶಾಸಕಾಂಗ ಸಭೆ  ನಡೆಯಬೇಕಾಗಿತ್ತು, ಆದರೆ, ಇದೀಗ ಸಭೆ ನಡೆಸದಂತೆ ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಆಪ್ತರ ಸಲಹೆಯ ಮೇರೆಗೆ ಸಭೆ ರದ್ದು ಮಾಡಲಾಗಿದೆ. ಈ ಮೂಲಕ ಜು. 26ರಂದು ರಾಜೀನಾಮೆ ನೀಡಲ್ಲ ಅಂತ ಸಂದೇಶ ರವಾನಿಸಿದ್ದಾರಾ? ಎಂದು ಹೇಳಲಾಗುತ್ತಿದೆ. 

ಬಿಎಸ್‌ವೈರನ್ನು ಕೆಳಗಿಳಿಸಿದ್ರೆ, ಪರಿಣಾಮ ಎದುರಿಸಿ: ವೀರಶೈವ ಯುವ ಬ್ರಿಗೇಡ್ ಎಚ್ಚರಿಕೆ