Asianet Suvarna News Asianet Suvarna News

ಸಚಿವ ಸಂಪುಟ ವಿಸ್ತರಣೆ: ಬಿಜೆಪಿ ಶಾಸಕರು, ಸಚಿವರಿಗೆ ಕಟೀಲ್‌ ಎಚ್ಚರಿಕೆ..!

ಬಿಜೆಪಿ ನಾಯಕರ ಹೇಳಿಕೆಗೆ ಬಿಜೆಪಿ ವರಿಷ್ಠರ ಅಸಮಾಧಾನ| ಸಿಎಂ ಪರಮಾಧಿಕಾರ ಪ್ರಶ್ನಿಸುವ ರೀತಿಯಲ್ಲಿ ಹೇಳೀಕೆ ಬೇಡ| ಬಹಿರಂಗ ಹೇಳಿಕೆಗಳಿಂದ ಹೈಕಮಾಂಡ್‌ ನಾಯಕರಿಗೂ ಬೇಸರ| 

ಬೆಂಗಳೂರು(ಡಿ.03):  ಸಚಿವ ಸಂಪುಟ ವಿಸ್ತರಣೆ ಕುರಿತು ನಾಯಕರ ಹೇಳಿಕೆಗೆ ಬಿಜೆಪಿ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ಹೇಳಿಕೆಗಳಿಂದ ಪಕ್ಷದ ಇಮೇಜ್‌ಗೆ ಧಕ್ಕೆಯಾಗುತ್ತಿದೆ. ಹೀಗಾಗಿ ಶಾಸಕರು, ಮುಖಂಡರು, ಸಚಿವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಎಚ್ಚರಿಕೆ ನೀಡಿದ್ದಾರೆ. 

ಬಳ್ಳಾರಿ: ಡೋಲು ಬಡಿದು ಸಂಭ್ರಮಿಸಿದ ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಪರಮಾಧಿಕಾರವನ್ನ ಪ್ರಶ್ನಿಸುವ ರೀತಿಯಲ್ಲಿ ಯಾವುದೇ ಹೇಳೀಕೆ ನೀಡಬೇಡಿ. ಬಹಿರಂಗ ಹೇಳಿಕೆಗಳಿಂದ ಹೈಕಮಾಂಡ್‌ ನಾಯಕರಿಗೂ ಬೇಸರವಾಗಿದೆ. ಹೀಗಾಗಿ ಯಾವುದೇ ರೀತಿಯಾದ ಬಹಿರಂಗ ಹೇಳಿಕೆಗಳನ್ನ ನೀಡಬೇಡಿ ಎಂದು ಸಚಿವರು, ಶಾಸಕರಿಗೆ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.