Asianet Suvarna News Asianet Suvarna News

ಕೋಲಾರ ಮನೆ ಹುಡುಕಾಟದಲ್ಲಿ ಸಿದ್ದು, ಟಗರು ಬಲೆಗೆ ಬೀಳಿಸಲು ಬಿಜೆಪಿ ಸಜ್ಜು!

ಕಾಂಗ್ರೆಸ್‌ಗೆ ಬಿಕೆ ಸಂಕಟ, ಬಿಜೆಪಿಯಲ್ಲಿ ಕಟೀಲ್ ಸಂಚಲನ, ಸೀತೆಗೆ ಹೆಂಡ ಕುಡಿಸುತ್ತಿದ್ದ ರಾಮ, ಫ್ರೊ. ಭಗವಾನ್ ವಿವಾದ, ಕೋಲಾರಕ್ಕೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ವೇಶ್ಯೆ ಹೇಳಿಕೆಗೆ ಬಿಕೆ ಹರಿಪ್ರಸಾದ್ ಮೊಂಡುವಾದ ಸೇರಿದಂತೆ ಇಂದಿನ ಇಡೀ ದಿನದ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಘೋಷಣೆ ಮಾಡಿದ ಬೆನ್ನಲ್ಲೇ ಹೈ ಪ್ರೊಫೈಲ್ ಕ್ಷೇತ್ರವಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ ಬೆಂಬಲಿಗರು ಮನೆ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಸಿದ್ದರಾಮಯ್ಯಗೆ ಸೋಲುಣಿಸಲು ಅತೀ ದೊಡ್ಡ ಪ್ಲಾನ್ ರೆಡಿ ಮಾಡಿದೆ. ಬಿಜೆಪಿ ಸಂಘಟನಾ ಚತುರ ಬಿಎಲ್ ಸಂತೋಷ್ ಕೋಲಾರಕ್ಕೆ ಎಂಟ್ರಿಕೊಟ್ಟಿದ್ದಾರೆ.ಕೋಲಾರದಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.  ಇತ್ತ ಪಕ್ಷಾಂತರ ನಾಯಕರನ್ನು ವೇಶ್ಯೆಯರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಬಳಿಕ ಕ್ಷಮೆ ಕೇಳಿದ್ದರು. ಆದರೆ ಇಂದು ಉಲ್ಟಾ ಹೊಡೆದಿದ್ದಾರೆ. ನಾನು ವೇಶ್ಯೆ ಪದ ಹೇಳೇ ಇಲ್ಲ. ಈ ಶಬ್ದ ನಾನು ಮಾತನಾಡಿದ್ದರೆ ವಿಧಾನಪರಿಷತ್ತಿನ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಬಿಕೆ ಹರಿಪ್ರಸಾದ್ ಭಾಷಣ, ಬಳಿಕ ಮೊಂಡುವಾದ ಇಲ್ಲಿದೆ ನೋಡಿ.

Video Top Stories