Asianet Suvarna News Asianet Suvarna News

ಕಲಬುರಗಿ: ಬಿಜೆಪಿಯಿಂದ ಕಾಂಗ್ರೆಸ್‌ ಸದಸ್ಯರಿಗೆ ಆಮಿಷ, ಪ್ರಿಯಾಂಕ್‌ ಖರ್ಗೆ

*  ಮೈತ್ರಿ ಸಂಬಂಧ ಜೆಡಿಎಸ್‌ ಜೊತೆ ಚರ್ಚೆ 
*  ಕಲಬುರಗಿಯಲ್ಲಿ ಅಭಿವೃದ್ಧಿಗೆ ಜೆಡಿಎಸ್‌ ನಮಗೆ ಬೆಂಬಲ ಕೊಡಲಿ 
*  ಸಂಖ್ಯಾಬಲ ಇಲ್ಲದಿದ್ದಕ್ಕೆ ನೋಟಿಫಿಕೇಷನ್‌ ಹೊರಡಿಸದ ಸರ್ಕಾರ 
 

ಬೆಂಗಳೂರು(ಸೆ.11):  ಕಲಬುರಗಿಯಲ್ಲಿ ಅಭಿವೃದ್ಧಿಗೆ ಜೆಡಿಎಸ್‌ ನಮಗೆ ಬೆಂಬಲ ಕೊಡಲಿ ಅಂತ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ನಗರದಲ್ಲಿ ಇಂದು(ಶನಿವಾರ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭೇಟಿಯಾದ ಬಳಿಕ ಮಾತನಾಡಿದ ಅವರು, ಮೈತ್ರಿ ಸಂಬಂಧ ಜೆಡಿಎಸ್‌ ಜೊತೆಗೆ ಚರ್ಚೆ ನಡೆದಿದೆ. ಬಿಜೆಪಿಯಿಂದ ಕಾಂಗ್ರೆಸ್‌ ಪಾಲಿಕೆ ಸದಸ್ಯರಿಗೆ ಆಮಿಷ ಬಂದಿದೆ. ಮೊದಲು ಸರ್ಕಾರ ನೋಟಿಫಿಕೇಷನ್‌ ಹೊರಡಿಸಲಿ. ಸಂಖ್ಯಾಬಲ ಇಲ್ಲದಿದ್ದಕ್ಕೆ ಸರ್ಕಾರ ನೋಟಿಫಿಕೇಷನ್‌ ಹೊರಡಿಸುತ್ತಿಲ್ಲ ಅಂತ ಹೇಳಿದ್ದಾರೆ. 

ಕಲಬುರಗಿ ಪಾಲಿಕೆ: 'ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಪಕ್ಕಾ'

Video Top Stories