
ಆರ್ಎಸ್ಎಸ್ಗೆ ಸರ್ಕಾರದಿಂದ ಬಿಗ್ ಶಾಕ್: ಭೂಮಿ ಹಸ್ತಾಂತರಕ್ಕೆ ತಡೆ
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಆರ್ಎಸ್ಎಸ್ಗೆ ನೀಡಿದ ಜಾಗದ ಹಸ್ತಾಂತರಕ್ಕೆ ತಡೆ ನೀಡಲಾಗಿದೆ.
ಬಿಜೆಪಿ(BJP)ಅವಧಿಯಲ್ಲಿ ಮಂಜೂರಾಗಿದ್ದ ಭೂಮಿ ಹಸ್ತಾಂತರಕ್ಕೆ ಕಾಂಗ್ರೆಸ್(Congress) ಸರ್ಕಾರ ತಡೆ ನೀಡಿದೆ. ಆರ್ಎಸ್ಎಸ್ಗೆ(RSS) ನೀಡಿದ ಜಾಗವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ. ಸಿಎಂ ಸಿದ್ದರಾಮಯ್ಯ(Siddaramaiah) ಸೂಚನೆ ಮೇರೆಗೆ ಈ ಆದೇಶಕ್ಕೆ ಬ್ರೇಕ್ ಹಾಕಲಾಗಿದೆ. ಜನ ಸೇವಾ ಟ್ರಸ್ಟ್ಗೆ ಮಂಜೂರಾಗಿದ್ದ ಭೂಮಿ ಹಸ್ತಾಂತರಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ತಾವರಕೆರೆಯ ಕುರುಬರಹಳ್ಳಿಯ 35 ಎಕರೆ 33 ಗುಂಟೆ ಭೂಮಿ ಹಸ್ತಾಂತರಕ್ಕೆ ತಡೆ ಹಿಡಿಯಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಇದಕ್ಕೆ ಸಂಬಂಧಿಸಿದಂತೆ ಲಿಖಿತ ಉತ್ತರ ಕೊಡಲಾಗಿದೆ. ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಈ ಬಗ್ಗೆ ಪ್ರಶ್ನೆ ಕೇಳಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ?: ದೆಹಲಿ ಸಭೆ ನಂತರ ಅಂತಿಮ ಮುದ್ರೆ..?