
News Hour: ಹೈಕಮಾಂಡ್ ಅಂಗಳಕ್ಕೆ ಬಳ್ಳಾರಿ ಬೇಗುದಿ
ಬಳ್ಳಾರಿ ಬಿಜೆಪಿಯಲ್ಲಿ ಬಣಗಳ ಕಿಚ್ಚು ಹೈಕಮಾಂಡ್ ತಲುಪಿದ್ದು, ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ವಿಜಯೇಂದ್ರ ದೆಹಲಿಗೆ ದೌಡಾಯಿಸಿದ್ದಾರೆ.
ಬೆಂಗಳೂರು (ಜ.24): ಬಳ್ಳಾರಿ ಬಿಜೆಪಿ ಬೇಗುದಿ ಹೈಕಮಾಂಡ್ ಅಂಗಳ ತಲುಪಿದೆ. ಶ್ರೀರಾಮುಲು ಬೆನ್ನಿಗೆ ಹೈಕಮಾಂಡ್ ನಿಂತಿದೆ. ಬಣ ಬಡಿದಾಟದ ಮಧ್ಯೆ ವಿಜಯೇಂದ್ರ ದೆಹಲಿಗೆ ದೌಡಾಯಿಸಿದ್ದಾರೆ.
ಒಂದು ಕಾಲದಲ್ಲಿ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಒಂದೇ ಜೀವ ಎರಡು ದೇಹದಂತಿದ್ದರು. ಆದರೆ, ಈಗ ಅವರ ನಡುವೆ ದ್ವೇಷದ ಗೋಡೆ ಬೆಳೆದುಬಿಟ್ಟಿದೆ. ಸ್ನೇಹ ಮರೆತು ನೇರಾನೇರಾ ಕುಚಿಕುಗಳು ಕದನಕ್ಕೆ ಇಳಿದಿದ್ದಾರೆ.
News Hour: ಶಂಕರ್ ಗುರು ರೀತಿ ಇದ್ದ ರೆಡ್ಡಿ-ರಾಮುಲು, ಹಾವು-ಮುಂಗುಸಿ ಆಗಿದ್ದೇಗೆ?
ಇನ್ನೊಂದೆಡೆ, ರಾಜ್ಯಪಾಲರು- ಸರ್ಕಾರದ ಮಧ್ಯೆ ಸಮರ ಮುಂದುವರಿದಿದೆ. ನಾಲ್ಕು ಮಸೂದೆಗಳಿಗೆ ಸಹಿ ಹಾಕದೇ ವಾಪಸ್ ಕಳಿಸಿದ್ದಾರೆ. 5 ಮಸೂದೆಗೆ ಅಂಕಿತ ಹಾಕದೇ ಗೆಹಲೋತ್ ಉಳಿಸಿಕೊಂಡಿದ್ದಾರೆ.