
ಶಿವಮೊಗ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ...ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?
ಶಿವಮೊಗ್ಗದ ಬಿಜೆಪಿಯ ಟಿಕೆಟ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಚನ್ನಬಸಪ್ಪ ಅನ್ನೋ ಹೊಸ ಮುಖವನ್ನ ಇಳಿಸಿದೆ ಭಾರತೀಯ ಜನತಾ ಪಕ್ಷ.
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದ್ದು, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಈ ಮಧ್ಯೆ ಶಿವಮೊಗ್ಗದ ಬಿಜೆಪಿಯ ಟಿಕೆಟ್ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಿವಮೊಗ್ಗ ಕ್ಷೇತ್ರಕ್ಕೆ ಚನ್ನಬಸಪ್ಪ ಅನ್ನೋ ಹೊಸ ಮುಖವನ್ನ ಇಳಿಸಿದೆ ಭಾರತೀಯ ಜನತಾ ಪಕ್ಷ. ಈಶ್ವರಪ್ಪನವರು ರಾಜಕೀಯ ರಾಜೀನಾಮೆ ಘೋಷಿಸಿದ ಬಳಿಕ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಫಿಕ್ಸ್ ಅಂತಲೇ ಹೇಳಲಾಗುತ್ತಿತ್ತು. ಕಾಂತೇಶ್ ಹೊರತು ಪಡಿಸಿ ಅನೇಕ ಕೇಸರಿ ಕಲಿಗಳು ಟಿಕೆಟ್ ಗಿಟ್ಟಿಸಿಕೊಲ್ಳುವ ರೇಸಿನಲ್ಲಿ ಇದ್ದರು. ಎಂಡ್ ಆಫ್ ದಿ ಡೇ, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಚನ್ನಬಸಪ್ಪ ಅನ್ನೋ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಹಾಗಾದರೆ ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?ಶಿವಮೊಗ್ಗದಲ್ಲಿ ಜೆಡಿಎಸ್ ಪ್ರಾಬಲ್ಯ ಹೇಗಿದೆ..? ಈ ವಿಡಿಯೋ ನೋಡಿ
Add Asianetnews Kannada as a Preferred Source
