Asianet Suvarna News Asianet Suvarna News

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರಾ..? ದಳಪತಿ ಕೊಟ್ಟ ಸುಳಿವು ಎಂಥದ್ದು..?

ಎಚ್’ಡಿಕೆ ಎದುರಲ್ಲೇ ಸಿಎಂ ಕನಸು ಬಿಚ್ಚಿಟ್ಟ ಡಿಕೆ..! ಒಕ್ಕಲಿಗ ಸ್ವಾಮೀಜಿ ಹೇಳಿದ ಪೆನ್ನಿನ ಕಥೆ..! ಎಲ್ಲಾ ದೈವೇಚ್ಛೆ ಎಂದರೇಕೆ ದಳಪತಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಒಕ್ಕಲಿಗರ ಒಗ್ಗಟ್ಟು, ಯಾರಿಗೆ ಒಬ್ಬಟ್ಟು?

ಬೆಂಗಳೂರು, (ಆ.20): ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಒಕ್ಕಲಿಗರ ಕೋಟೆಯಲ್ಲಿ ಬಿರುಗಾಳಿ... ಬೆಂಕಿ ಮತ್ತು ಸುನಾಮಿ ಮಧ್ಯೆ ಒಗ್ಗಟ್ಟಿನ ಮಂತ್ರ... ಎಸ್.ಎಂ ಕೃಷ್ಣ ನಂತ್ರ ರಾಜ್ಯಕ್ಕೆ ಮತ್ತೊಮ್ಮೆ ಒಕ್ಕಲಿಗ ಮುಖ್ಯಮಂತ್ರಿ ಬರೋದು ಪಕ್ಕಾನಾ..? ಸಿಎಂ ಯುದ್ಧದಲ್ಲಿ ಡಿಕೆ ಕುಮಾರ್ ಮತ್ತು ಕುಮಾರಸ್ವಾಮಿ ಮಧ್ಯೆ ಒಂದೇ ವೇದಿಕೆಯಲ್ಲಿ ನಡೆದದ್ದೇನು.? ಏನದು ಒಕ್ಕಲಿಗರ ಸ್ವಾಮೀಜಿ ಹೇಳಿದ ಪೆನ್ನಿನ ಕಥೆಯ ಅಸಲಿಯತ್ತು..? 

Chitradurga: ಒಕ್ಕಲಿಗರ ಸಮಾವೇಶದಲ್ಲಿ ಸಿಎಂ ಪಟ್ಟಕ್ಕೇರುವುದನ್ನೇ ಜಪ ಮಾಡಿದ ನಾಯಕರು!

ರಾಜ್ಯ ರಾಜಕಾರಣದಲ್ಲಿ ಹೊಸ ಲೆಕ್ಕಾಚಾರ. ಹಾಗಾದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಡಿಕೆ ಶಿವಕುಮಾರ್ ಅವ್ರೇ ಮುಖ್ಯಮಂತ್ರಿಯಾಗ್ತಾರಾ..? ಒಂದು ವೇಳೆ ಸಮ್ಮಿಶ್ರ ಸರ್ಕಾರ ಬಂದ್ರೆ, ಡಿಕೆಶಿ ಜೊತೆ ಎಚ್ಡಿಕೆ ಮತ್ತೆ ಕೈ ಜೋಡಿಸ್ತಾರಾ..? ಈ ಬಗ್ಗೆ ದಳಪತಿ ಕೊಟ್ಟ ಸುಳಿವು ಎಂಥದ್ದು..? ಆ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ನೋಡೋಣ,

Video Top Stories