Asianet Suvarna News Asianet Suvarna News

ಜಗ್ಗಲ್ಲ-ಬಗ್ಗಲ್ಲ ಎಂದಿದ್ದ ಈಶ್ವರಪ್ಪ ದಿಢೀರ್ ರಾಜೀನಾಮೆ ಘೋಷಿಸಿದ್ಯಾಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ

ಮೊದಲಿಗೆ ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಅಬ್ಬರಿಸಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಮುಗಿಬಿದ್ರು ಈಶ್ವರಪ್ಪ ಕ್ಯಾರೆ ಎನ್ನಲಿಲ್ಲ. ಅಲ್ಲದೇ ಇಡೀ ರಾಜ್ಯ ಬಿಜೆಪಿಯೇ ಈಶ್ವರಪ್ಪನವರ ಬ್ಯಾಟಿಂಗ್ ಮಾಡಿತ್ತು. ಆದ್ರೆ, ದಿಢೀರ್ ಅಂತ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಘೋಷಿಸಿದರು. ಆ ರಾಜೀನಾಮೆ ಹಿಂದಿನ ರಹಸ್ಯ ಇಲ್ಲಿದೆ ನೋಡಿ....

ಬೆಂಗಳೂರು, (ಏ.15): ನನ್ನ ಸಾವಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ (Minister K.S.Eshwarappa) ಅವರೇ ಕಾರಣ ಎಂದು ಸ್ಪಷ್ಟವಾಗಿ ಡೆತ್​ ನೋಟ್ (Death Note)​ ಬರೆದಿಟ್ಟು ಗುತ್ತಿಗೆದಾರ  ಸಂತೋಷ್​ ಪಾಟೀಲ್ (Contractor Santosh Patil) ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಸಿಕ್ತು ಬಹುದೊಡ್ಡ ಅಸ್ತ್ರ, ಬಿಜೆಪಿ ವಿರುದ್ಧ ಸಮರಕ್ಕೆ ಸಿದ್ಧ

ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ರು, ಮೊದಲಿಗೆ ಈಶ್ವರಪ್ಪ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವುದಿಲ್ಲ ಎಂದು ಅಬ್ಬರಿಸಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಮುಗಿಬಿದ್ರು ಈಶ್ವರಪ್ಪ ಕ್ಯಾರೆ ಎನ್ನಲಿಲ್ಲ. ಅಲ್ಲದೇ ಇಡೀ ರಾಜ್ಯ ಬಿಜೆಪಿಯೇ ಈಶ್ವರಪ್ಪನವರ ಬ್ಯಾಟಿಂಗ್ ಮಾಡಿತ್ತು. ಆದ್ರೆ, ದಿಢೀರ್ ಅಂತ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಘೋಷಿಸಿದರು. ಆ ರಾಜೀನಾಮೆ ಹಿಂದಿನ ರಹಸ್ಯ ಇಲ್ಲಿದೆ ನೋಡಿ....

Video Top Stories