Asianet Suvarna News Asianet Suvarna News

ರಾಮನಗರದಲ್ಲಿ ರಾಮಮಂದಿರ್, ಕಾಂಗ್ರೆಸ್‌ಗೆ ಗುಡ್ ಬೈ ಹೇಳ್ತಾರ ಜಮೀರ್?

ಮಾಸ್ಕ್ ಹೆಸರಲ್ಲಿ ಆರ್ ಅಶೋಕ್-ಡಿಕೆ ಶಿವಕುಮಾರ್ ಜಟಾಪಟಿ, ಧರ್ಮದ ಪರ ಕಾಂಗ್ರೆಸ್ ನಿಲ್ಲಲಿಲ್ಲ, ಪಕ್ಷದ ವಿರುದ್ಧ ಜಮೀರ್ ಅಸಮಾಧಾನ, ವಲಸಿಗರಿಗೆ ಆಹ್ವಾನ ಕೊಟ್ಟ ಡಿಕೆಶಿ, ಸಿದ್ದರಾಮಯ್ಯಗೆ ಇರಿಸುಮುರಿಸು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಅಮಿತ್ ಶಾ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ವಿಡಿಯೋ ನ್ಯೂಸ್ ಹವರ್ ಇಲ್ಲಿದೆ.

ಚುನಾವಣೆಗೆ ಇನ್ನು ಕೆಲ ತಿಂಗಳು ಮಾತ್ರ ಬಾಕಿ. ಉತ್ತರ ಭಾರತದಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ರಾಮಾಯಣ ಜೊತೆಗೆ ಗಾಢ ಸಂಬಂಧ ಹೊಂದಿರುವ ಕರ್ನಾಟಕದಲ್ಲಿ ಇದೀಗ ರಾಮ ಮಂದಿರ ನಿರ್ಮಾಣ ಮಾಡಲು ಬಿಜೆಪಿ ಮುಂದಾಗಿದೆ. ರಾಮನಗರದಲ್ಲಿರುವ ರಾಮದೇವ ಬೆಟ್ಟದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಸಚಿವ ಅಶ್ವತ್ಥ್ ನಾರಾಯಣ್ ಘೋಷಿಸಿದ್ದಾರೆ.ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ಸಚಿವ ಅಶ್ವತ್ಥ್ ನಾರಾಯಣ್ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿಕ್ರಿಯೆ ನೀಡಿದೆ. ಯಾವ ಮಂದಿರವಾದರೂ ಮಾಡಲಿ ನಾವೇನು ಬೇಡ ಎಂದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇತ್ತ ಮೂರೂವರೇ ವರ್ಷ ಮಾಡದೇ ಇದ್ದವರು 3 ತಿಂಗಳಲ್ಲಿ ಮಾಡ್ತಾರ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಮುನಿಸಿಕೊಂಡಿರುವ ಜಮೀರ್ ಅಹಮ್ಮದ್ ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಇಂದಿನ ಇಡೀ ದಿನದ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ. 

Video Top Stories