ಅಧಿವೇಶನದ ವೇಳೆ ಬಿಎಸ್ವೈಗೆ ಅನಾಮಧೇಯ ಪತ್ರ, ರಾಜಕೀಯ ಕಲ್ಲೋಲ
ಬಿಎಸ್ ವೈ ವಿರುದ್ಧ ಪತ್ರ/ ಅನಾಮಧೇಯ ಪತ್ರ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಸಿದ ಹಲ್ ಚಲ್/ ಮೊಬೈಲ್ ನಿಂದ ಮೊಬೈಲ್ಗೆ ಪತ್ರ ವೈರಲ್/ ನಾಲ್ಕು ಪುಟಗಳ ಪತ್ರ
ಬೆಂಗಳೂರು[ಫೇ. 18] ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಅಧಿವೇಶನದ ಸಂದರ್ಭದಲ್ಲಿ ಅನಾಮಧೇಯ ಪತ್ರವೊಂದು ಬಂದಿದೆ. ಸಿಎಂ ಯಡಿಯೂರಪ್ಪ ಅವರಗೆ ವಯಸ್ಸಾಯಿತು. ಸಿಎಂ ಕುರ್ಚಿ ಬಿಟ್ಟು ರಾಜ್ಯಪಾಲರಾಗಿ ಎಂದು ಪತ್ರ ಹೇಳಿದೆ.
ಅಷ್ಟಕ್ಕೂ ಆಡಿಯೋ ಬಾಂಬ್ ಪ್ರಕರಣ ಏನಾಯ್ತು?
ಪುತ್ರ ವಿಜಯೇಂದ್ರ ವರ್ಗಾವಣೆ ಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಬಿಎಸ್ ವೈ ಅವರನ್ನು ಹೊಗಳಿದ 4 ಪುಟಗಳ ಪತ್ರ ನಂತರ ಬಿಎಸ್ ವೈ ಅವರನ್ನು ಟೀಕೆ ಮಾಡುತ್ತಿದೆ.