
Today Horoscope: ಇಂದು ಭಾರತ ಹುಣ್ಣಿಮೆ ಇದ್ದು, ಸವದತ್ತಿ ಯಲ್ಲಮ್ಮನ ಸ್ಮರಣೆ ಮಾಡಿ
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶನಿವಾರ, ಪೌರ್ಣಮಿ ತಿಥಿ, ಮಖಾ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಖಾ ಪೌರ್ಣಮಿ ತುಂಬಾ ವಿಶಿಷ್ಟವಾದ ದಿನವಾಗಿದೆ. ಈ ದಿನ ವ್ಯಾಸರ ಆರಾಧನೆ ಮಾಡಲಾಗುತ್ತದೆ. ಅಲ್ಲದೇ ಇಂದು ಯಲ್ಲಮ್ಮ ತಾಯಿಯ ಆರಾಧನೆ ಮಾಡಿ. ಕರ್ಕಟಕ ರಾಶಿಯವರಿಗೆ ಈ ದಿನ ಆಹಾರ ಸಮೃದ್ಧಿ ಇದ್ದು, ಕುಟುಂಬ ಸೌಖ್ಯ. ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರದಲ್ಲಿ ತೊಡಕು. ಪಿತೃದೇವತೆಗಳ ಆರಾಧನೆ ಮಾಡಿ. ಸಿಂಹ ರಾಶಿಯವರಿಗೆ ವೃತ್ತಿಯಲ್ಲಿ ಅನುಕೂಲ. ಕಿರಿಕಿರಿಯೂ ಇದೆ. ರಸ ವ್ಯಾಪಾರಿಗಳಿಗೆ ನಷ್ಟ. ಬಂಡವಾಳದ ಹೊರೆ. ಮಕ್ಕಳ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ. ಚರ್ಮ ಸಮಸ್ಯೆ ಬಾಧಿಸಲಿದೆ. ಬುಧ ಕವಚ ಪಠಿಸಿ.
ಇದನ್ನೂ ವೀಕ್ಷಿಸಿ: ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ: ಸ್ವರ್ಣವಲ್ಲಿ ನೂತನ ಯತಿಗಳಿಗೆ ಸನ್ಯಾಸ ದೀಕ್ಷೆ